ಸ್ಥಳೀಯ ಸುದ್ದಿಗಳು

ನಿನ್ನೆ ನಡೆದ ಯುವನಿಧಿ ಕಾರ್ಯಕ್ರಮ ಯಶಸ್ವಿಯಾಗಿದೆ-ಹೆಚ್ ಸಿ ಯೋಗೀಶ್

ಸುದ್ದಿಲೈವ್/ಶಿವಮೊಗ್ಗ

ಕಾಂಗ್ರೆಸ್ ನ ಐದನೇ ಗ್ಯಾರಂಟಿ ನಮ್ಮ‌ಜಿಲ್ಲೆಯಲ್ಲಿ ನಡೆದಿದೆ. ಸಚಿವ ಮಧು ಬಂಗಾರಪ್ಪ ಮತ್ತು ಡಾ.ಶರಣ ಪ್ರಕಾಶ್ ಪಾಟೀಲ್ ನೇತೃತ್ವದಲ್ಲಿ ನಡೆದ ಯುವನಿಧಿ ಕಾರ್ಯಕ್ರಮ ತುಂಬ ಯಶ್ವಿಯಾಗಿನಡೆದಿದೆ ಎಂದು ಕಾಂಗ್ರೆಸ್ ಮುಖಂಡ ಹೆಚ್ ಸಿ ಯೋಗೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.‌

ಮೂರು ನಾಲ್ಕು ಬಾರಿ ಸಭೆ ನಡೆಸಿ ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಯುವನಿಧಿ ಕಾರ್ಯಕ್ರಮಕ್ಕೆ  ಕರೆದೊಯ್ಯಲಾಗಿದೆ. ಶಾಲೆಯ ಎಸ್ ಡಿ ಎಂಸಿ, ಪದಾಧಿಕಾರಿಗಳು, ಶಿಕ್ಷಕರು ವಿದ್ಯಾರ್ಥಿಗಳಿಗೆ ಯೋಗೀಶ್ ಧನ್ಯವಾದ ತಿಳಿಸಿದ್ದಾರೆ.

ಮಾಧ್ಯಮಗಳ ಪ್ರಚಾರದಿಂದ ವಿದ್ಯಾರ್ಥಿಗಳಿಗೆ ಭಾಗಿಯಾಗಲು ಹುಮ್ಮಸ್ಸು ಸಿಕ್ಕಿದೆ. ಮುಂದಿನ ವರ್ಷದಲ್ಲಿ ನೋಂದಣಿ ಮಾಡಿಕೊಳ್ಳುವ ಮಕ್ಕಳಿಗೆ ಈ ಕಾರ್ಯಕ್ರಮ ಸಹಕಾರಿಯಾಗಿದೆ. ನಾಲ್ಕು ಯೋಜನೆಯ ಫಲಾನುಭವಿಗಳ ಭಾಗಿಯಾಗಿದ್ದಾರೆ. ಎಲ್ಲ ಮನೆಗಳಿಗೆ ಸರ್ಕಾರ ಬಂದಿದೆ ಯುವಕರು ನಮಗೇನು ಸಿಕ್ಕಿದೆ ಎಂದು ಕೇಳುತ್ತಿದ್ದರು. ಯುವನಿಧಿ ಯುವಕರನ್ನ ಆಕರ್ಷಿಸಿದೆ ಎಂದರು.

ಫ್ರೀಡಂ ಪಾರ್ಕ್ ಗೆ ಅಲ್ಲಮ ಪ್ರಭು ಹೆಸರನ್ನ ಸಚಿವ ಮಧು ಬಂಗಾರಪ್ಪ ವೇದಿಕೆ ಮೇಲೆ ಪ್ರಸ್ತಾಪಿಸಿದರು. ಸಿಎಂ ಸಹ ಅಲ್ಲಮ ಪ್ರಭುವಿನ ಹೆಸರಿಡಲು ಸೂಚಿಸಿದರು. ಸುತ್ತೂರು ಶ್ರೀಗಳ ಕಾರ್ಯಕ್ರಮದ ವೇಳೆ ಸಿದ್ದೇಶ್ವರ ಸ್ವಾಮಿಗಳು ಅಲ್ಲಮ ಪ್ರಭು ಎಂದು ಹೆಸರಿಡಲು ಸೂಚಿಸಿದ್ದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ ಕೆ, ಮುಖಂಡರಾದ ಎಸ್ ಪಿ ದಿನೇಶ್, ಪಾಲಿಕೆ ಸದಸ್ಯರಾದ ರಮೇಶ್‌ಹೆಗ್ಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/6742

Related Articles

Leave a Reply

Your email address will not be published. Required fields are marked *

Back to top button