ಸ್ಥಳೀಯ ಸುದ್ದಿಗಳು
ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ-ಕಾಂತೇಶ್
ಸುದ್ದಿಲೈವ್/ಶಿವಮೊಗ್ಗ
ಹಿಂದುತ್ವದ ಕಾರಣಕ್ಕಾಗಿ ಶಿವಮೊಗ್ಗದಲ್ಲಿ ಈಶ್ವರಪ್ಪ ಸ್ಪರ್ಧೆ ಖಚಿತ ಎಂದು ಮಾಜಿ ಡಿಸಿಎಂ ಈಶ್ವರಪ್ಪನವರ ಪುತ್ರ ಕಾಂತೇಶ್ ತಿಳಿಸಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈಶ್ವರಪ್ಪ ಅವರಿಗೆ ಎಲ್ಲಾ ಕಡೆ ಒಳ್ಳೆಯ ಬೆಂಬಲ ಸಿಗ್ತಿದೆ. ಸಿಗಂಧೂರು ಚೌಡೇಶ್ವರಿ ದೇವಿ ಆಶೀರ್ವಾದ ಇದೆ. ಯಾರು ಎಷ್ಟೇ ಮನವೊಲಿಸಿದರು ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದರು.
ಸ್ಪರ್ಧೆ ಮಾಡಲು ನಿರ್ಧರಿಸಿ ಆಗಿದೆ ಮಾಡಿಯೇ ಮಾಡ್ತೇವೆ. ಪಕ್ಷ ಉಳಿಯಬೇಕು ಎಂಬುದು ಎಲ್ಲಾ ಕಾರ್ಯಕರ್ತರ ಆಶಯವಾಗಿದೆ. ಅದರಂತೆ ಕಾರ್ಯಕರ್ತರ ಬೆಂಬಲ ಸಹ ಸಿಗ್ತಿದೆ ಎಧರು.
ಇದನ್ನೂ ಓದಿ-https://suddilive.in/archives/11098