ಸ್ಥಳೀಯ ಸುದ್ದಿಗಳು

ಜನರನ್ನ ಬಂಧನದಲ್ಲಿರಿಸಿ ಮೋದಿ ಸಂಚಾರ!

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಮೋದಿ ಆಗಮನಕ್ಕೆ ಬಿಜೆಪಿ ಪಕ್ಷವೊಂದೇ ಸಂಭ್ರಮಿಸಬೇಕಾ ಅಥವಾ ಸಾರ್ವಜನಿಕರಿಗೂ ಹಬ್ಬವಾಗುವಂತೆ ಪರಿಣಮಿಸಬೇಕಾ‌ ಎಂಬ ಪ್ರಶ್ನೆಯನ್ನ ಕೇಳುವಂತ ಮಾಡಿದೆ. ಮೋದಿ ಆಗಮನದಿಂದ ರಸ್ತೆಗಳಲ್ಲಿ ನಿರ್ಮಿಸಿರುವ ಬ್ಯಾರಿಕೇಡ್ ಗಳು ಜನರನ್ನ ಹಿಂಸೆಗೆ ಒಳಪಡಿಸಿದೆ.

ಬಿಜೆಪಿ ಪಕ್ಷದವರಿಗೆ ಮಾತ್ರ ಈ ಸಂಭ್ರಮಾಚರಣ ಅನುಭವಿಸುವಂತಾದರೆ ಜನಸಾಮಾನ್ಯನಿಗೆ ಅವರ ಆಗಮನದಿಂದ‌ ಪರದಾಡುವಂತಾಗಿದೆ. ಬದಲಿ ಮಾರ್ಗಗಳನ್ನ ರೂಪಿಸಿದರೂ ಶಾಲಾ ಮಕ್ಕಳಿಗೆ ಮತ್ತು ಮಹಿಳೆಯರಿಗೆ, ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕನೇ ಸಾರ್ವಭೌಮ ಎಂಬ ಪೇಪರ್ ಸ್ಟೇಟ್ ಮೆಂಟ್ ಗಳು ಸಾರ್ವಜನಿಕರನ್ನ ಕಿತ್ತು ತಿನ್ಬುತ್ತಿದೆ.

ಇವತ್ತು ಮಕ್ಕಳಿಗೆ ಪರೀಕ್ಷೆ ಇದೆ. ಪರೀಕ್ಷೆಗೆ ಓಡಾಡುವ ಮಕ್ಕಳಿಗೆ ಸ್ವಲ್ಪನಾದರೂ ತೊಂದರೆ ಆಗುತ್ತೆ ಎಂದು ಜಿಲ್ಲಾಡಳಿತ ವಿಚಾರಿಸಿದೆಯಾ ಎಂಬ ಅನುಮಾನಕ್ಕೂ ಈಡುಮಾಡಿದೆ. ಹೋಗಲಿ ಶಾಲೆಗೆ ರಜೆಯದರೂ ಘೋಷಿಸಿದರೆ ಪೋಷಕರು ನಿಟ್ಟಿಸುರು ಬಿಡುವಂತಾಗುತ್ತಿತ್ತು ವಾಹನಗಳ ನಿರ್ಬಂಧವಿದ್ದಾಗ ಸ್ವಲ್ಪವೂ ಮುಂಜಾಗ್ರತೆಇಲ್ಲದಿರುವುದು ಜನರ ಮತ್ತು ಮಕ್ಕಳು ಪರದಾಟಕ್ಕೆ ಕಾರಣವಾಗಿದೆ.

ಮೆಗ್ಗಾನ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬಳು ರಸ್ತೆ ದಾಟುತ್ತಿರುವುದು ನೋಡಿದರೆ ಜನರನ್ನ ಬಂಧನದಲ್ಲಿರಿಸಿ ಮೋದಿ ಶಿವಮೊಗ್ಗ ಸಂಚಾರ ಆರಂಭಿಸಿದಂತಿದೆ. ಜನರ ಬಂಧನದ ಶಾಪ ತಟ್ಟದೆ ಇರಲಿ

ಇದನ್ನೂ ಓದಿ-https://suddilive.in/archives/10967

Related Articles

Leave a Reply

Your email address will not be published. Required fields are marked *

Back to top button