ಸ್ಥಳೀಯ ಸುದ್ದಿಗಳು

ಬಿಜೆಪಿಯಿಂದ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಶಿವಪ್ಪ ನಾಯಕನ ಪ್ರತಿಮೆಯ ಬಳಿ ಜಿಲ್ಲಾ ಬಿಜೆಪಿ ಪ್ರತಿಭಟಬೆ ನಡೆಸಿದೆ. ರಾಜ್ಯಸಭಾ ಅಧ್ಯಕ್ಷರಿಗೆ ಅವಮಾನ ಮಾಡಿರುವುದನ್ನ ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ.

ಶಿವಪ್ಪ ನಾಯಕ ವೃತ್ತದ ಬಳಿ ರಾಜ್ಯಸಭಾ ಅಧ್ಯಕ್ಚ‌ರಿಗೆ ಅವಮಾನ ಮಾಡಿದ ಟಿಎಂಸಿ ರಾಜ್ಯಸಭಾ ಸದಸ್ಯ ಕಲ್ಯಾಣ್ ಬ್ಯಾನರ್ಜಿಗೆ ದಿಕ್ಕಾರ, ಸಂವಿಧಾನ ವಿರೋಧಿ ಕಾಂಗ್ರೆಸ್ ಗೆ ದಿಕ್ಕಾರ, ಮಿಮಿಕ್ರಿ ರಾಹುಲ್ ಗಾಂಧಿ ಗೆ ದಿಕ್ಕಾರ ಎಂಬ ಪ್ಲಕಾರ್ಡ್ ಹಿಡಿದು ಪ್ರತಿಭಟನಾಕಾರರು ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ರಾಜ್ಯಸಭಾ ಅಧ್ಯಕ್ಷರನ್ನ ಮಿಮಿಕ್ರಿ ಮಾಡಿದ ಟಿಎಂಸಿ ಸದಸ್ಯ ಮತ್ತು ಕಾಂಗ್ರೆಸ್ ನಡೆಯನ್ನ ಖಂಡಿಸಿದರು.

ಪ್ರತಿಭಟನೆಯಲ್ಲಿ ಶಾಸಕ ಚೆನ್ನಬಸಪ್ಪ, ಬಿಜೆಪಿಯ ಎಸ್ ಎಸ್ ಜ್ಯೋತಿ ಪ್ರಕಾಶ್, ಗಿರೀಶ್ ಪಟೇಲ್, ಅಣ್ಣಪ್ಪ, ಹರಿಕೃಷ್ಣ, ಮಾಜಿ ಪಾಲಿಕೆ ಸದಸ್ಯೆ ಸುರೇಖಾ ಮುರಳೀಧರ್ ಮತ್ತು ಮೊದಲಾದವರು‌ ಭಾಗಿಯಾಗಿದ್ದರು

ಇದನ್ನು‌ಓದಿ-https://suddilive.in/archives/5179

Related Articles

Leave a Reply

Your email address will not be published. Required fields are marked *

Back to top button