ಕ್ರೈಂ ನ್ಯೂಸ್

ಕಾಲೇಜು ವಿದ್ಯಾರ್ಥಿಯ ಅಪಹರಣ ನಡೆದಿದ್ದೇಕೆ?

ಸುದ್ದಿಲೈವ್/ಶಿವಮೊಗ್ಗ

ಬಾಪೂಜಿನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೆಲ ವಿದ್ಯಾರ್ಥಿಗಳು ಸೇರಿಕೊಂಡು ಓರ್ವನನ್ನು ಅಪಹರಿಸಿ ಚಿತ್ರಹಿಂಸೆ ನೀಡಿರುವ ಪ್ರಕರಣ ನಡೆದಿದೆ.

ಜನವರಿ 05 ರಂದು ಕಾಲೇಜಿನ ಗೇಟು ಎಳೆದಾಡುವ ವಿಷಯಕ್ಕೆ ವಿದ್ಯಾರ್ಥಿಗಳ ಗುಂಪೊಂದು ಗಲಾಟೆ ಮಾಡಿತ್ತು. ನಂತರ ಜನವರಿ 08 ರಂದು ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿಯನ್ನು ಇದೇ ಗುಂಪು ಬಲವಂತವಾಗಿ ಬೈಕ್‌ನಲ್ಲಿ ಕೂರಿಸಿಕೊಂಡು ರಾಗಿಗುಡ್ಡ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು.

ಅಲ್ಲಿ ನಂದನ್ ಎಂಬಾತ, ನಾನು ಯಾರು ಎಂದು ಗೊತ್ತಿದ್ದರೂ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದಿದ್ದೀಯಾ? ನಾನು ಯಾರ ತಮ್ಮ ಎಂದು ಗೊತ್ತಿಲ್ಲವೇ ಎಂದು ವಿದ್ಯಾರ್ಥಿ ಕಣ್ಣಿನ ಗುಡ್ಡೆಗೆ ಗುದ್ದಿದ್ದಾನೆ. ಬಳಿಕ ಈ ಗುಂಪು ಚಾಕುವಿನಿಂದ ವಿದ್ಯಾರ್ಥಿಗೆ ಇರಿದಿದೆ.

ಜೊತೆಗೆ ವಿದ್ಯಾರ್ಥಿ ಮೊಬೈಲ್ ಕಸಿದುಕೊಂಡು ಬಲವಂತವಾಗಿ 1000 ರೂ.ಗಳನ್ನು ಪೋನ್‌ಪೇ ಮಾಡಿಸಿಕೊಂಡಿದ್ದಾರೆ. ಹಲ್ಲೆ ಮಾಡಿರುವ ಬಗ್ಗೆ ಪೊಲೀಸ್ ದೂರು ಕೊಟ್ಟರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿ ಸಂಜೆ ಬಳಿಕ ರಾಗಿಗುಡ್ಡ ಫ್ಲೈ ಓವರ್ ಹತ್ತಿರ ಬಿಟ್ಟು ಹೋಗಿದ್ದರು. ಗಾಯಾಳು ವಿದ್ಯಾರ್ಥಿ ಚಿಕಿತ್ಸೆ ನೀಡಲಾಗಿದೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/6702

Related Articles

Leave a Reply

Your email address will not be published. Required fields are marked *

Back to top button