ಕ್ರೈಂ ನ್ಯೂಸ್

ಹೊಸನಗರ ತಾಲೂಕು ಬಿಜೆಪಿ ಯುವಮೋರ್ಚಾದ ಅಧ್ಯಕ್ಷನ ಮೇಲೆ ಹಲ್ಲೆ-ಮೆಗ್ಗಾನ್ ಗೆ ದಾಖಲು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೋರ್ವ ಬಿಜೆಪಿ ಯುವಮೋರ್ಚಾ ಮುಖಂಡನ ಮೇಲೆ ಹಲ್ಲೆ ನಡೆದಿದೆ. ಯಾವುದೇ ಕಾರಣವಿಲ್ಲದೆ ಹಲ್ಲೆ ನಡೆದಿರುವುದಾಗಿ ಕೇಳಿಬಂದಿದೆ.

ಬಿಜೆಪಿ ಯುವಮೋರ್ಚಾ ತಾಲೂಕು ಅದ್ಯಕ್ಷ ನಿತಿನ್ ಮತ್ತುನವೀನ್  ಮೇಲೆ ಕಾಂಗ್ರೆಸ್ ಪ್ರಕಾಶ ಮತ್ತು ಇತರರು ಕಾರಿನಲ್ಲಿ ಬಂದು ಹಲ್ಲೆ ನಡೆಸಿದ್ದಾರೆ.  ನಿತಿನ್ ಕಣ್ಣಿಗೆ ಗಂಭೀರವಾಗಿ ಗಾಯಗಳಾಗಿವೆ.

ಹೊಸನಗರ ತಾಲೂಕಿನ ನಗರ ಸಮೀಪದ ದೇವಗಂಗೆ ಬಳಿ ರಾತ್ರಿ ನಡೆದ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ದೇವಗಂಗೆ ಗ್ರಾಮದಲ್ಲಿ ನಿನ್ನೆ ರಾತ್ರಿ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಬೇರೆ ಕಾರಿನಲ್ಲಿ ಬಂದ ಪ್ರಕಾಶ್ ಅಂಡ್ ಟೀಂ ಏಕಾಏಕಿ ಅಡ್ಡಗಟ್ಟಿ ಹಲ್ಲೆ ನಡೆಸಿದೆ.

ನಿತೀನ್ ಕಣ್ಣಿಗೆ ಗಾಯವಾದರೆ ಅವರ ಕಾರಿನ ಗ್ಲಾಸ್ ಕೂಡ ಒಡೆದು, ಹಾನಿ ಮಾಡಲಾಗಿದೆ. ಇನ್ನೊಂದು ಕಾರಿನಲ್ಲಿ ಎಂಟಕ್ಕೂ ಹೆಚ್ಚು ಜನರು ಬಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಕರಿಮನೆ ಗ್ರಾ.ಪಂ ಸದಸ್ಯರಾಗಿರುವ ಪ್ರಕಾಶ್ ಮೇಲೆ ಆರೋಪಿಸಲಾಗುತ್ತಿದ್ದು, ಹಲ್ಲೆ ಮಾಡಲು ಸಧ್ಯಕ್ಕೆ ಯಾವುದೇ ಕಾರಣ ಇಲ್ಲ ಎಂದು ನಿತಿನ್ ಸುದ್ದಿಲೈವ್ ಗೆ ಮಾಹಿತಿ ನೀಡಿದ್ದಾರೆ. ಮೂರು ತಿಂಗಳ ಹಿಂದೆ ಗಣಪತಿ ವಿಸರ್ಜನೆ ವೇಳೆ ಬ್ಯಾನರ್ ವಿಚಾರದಲ್ಲಿ ಪ್ರಕಾಶ್ ಮತ್ತು ನಿತಿನ್ ನಡುವೆ ವೈಮನಸ್ಸಾಗಿತ್ತು. ಅಂದಿನಿಂದ ದ್ವೇಷ ಸಾಧಿಸಿಕೊಂಡು ಬಂದಿದ್ದು ಹೊಸವರ್ಷಕ್ಕೆ ದ್ವೇಷ ಸ್ಪೋಟಗೊಂಡಿದೆ.

ಸಧ್ಯಕ್ಕೆ ಹಲ್ಲೆಗೊಳಗಾದ ನಿತೀನ್ ಮತ್ತು ಸಹೋದರ ನವೀನ್ ಇಬ್ಬರು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಗಿದೆ. ಆಸ್ಪತ್ರೆಗೆ ಬಿಜೆಪಿ ಜಿಲ್ಲಾಧ್ಯಕ್ಷ‌ ಮೇಘರಾಜ್ ಭೇಟಿ ನೀಡಿ ಆರ್ ಗ್ಯ ವಿಚಾರಿಸಿದ್ದಾರೆ.

ಮಾಧ್ಯಮಗಳಿಗೆ ಮಾತನಾಡಿ, ಜಿಲ್ಲೆಯಲ್ಲಿ ಕಾನೂನು ಸವ್ಯವಸ್ಥೆ ಹದಗೆಟ್ಟಿದೆ. ಡಿಸಿ ಮತ್ತು ಎಸ್ಪಿ ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಆಗ್ರಹಿಸಿದರು. ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಸುದ್ದಿಲೈವ್ ಗೆ ಪ್ರತಿಕ್ರಿಯಿಸಿದ್ದು ಎಫ್ಐಅರ್ ಆಗಬೇಕಿದೆ. ಎಫ್ಐಆರ್ ನಲ್ಲಿ ಏನಿದೆ ಕ್ರಮ‌ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ-https://suddilive.in/archives/5958

Related Articles

Leave a Reply

Your email address will not be published. Required fields are marked *

Back to top button