ರಾಜ್ಯ ಸುದ್ದಿಗಳು
ಐಜಿಪಿ ವಕೀಲರ ನೇಮಕಾತಿ ಬಗ್ಗೆ ಆಕ್ಷೇಪ
ಸುದ್ದಿಲೈವ್/ಶಿವಮೊಗ್ಗ
ಕರ್ನಾಟಕ ರಾಜ್ಯ ಸರ್ಕಾರವು ಸಿವಿಲ್ ನ್ಯಾಯಾಲಯಗಳಲ್ಲಿ ರಾಜ್ಯ ಸರ್ಕಾರದ ಪರ ವಾದ ಮಾಡಲು 49 ಏ ಜಿ ಪಿಗಳನ್ನು ನೇಮಕ ಮಾಡಿದೆ ಆದರೆ ಇದು ಅಕ್ರಮವಾಗಿದೆ ಎಂದು ಬಿಜೆಪಿ ಜಿಲ್ಲಾ ಕಾನೂನು ಪ್ರಕೋಷ್ಠಕ ಘಟಕ ಆರೋಪಸಿದೆ.
ಈ ನೇಮಕಾತಿ ಮಾಡುವ ಪೂರ್ವದಲ್ಲಿ ವಕೀಲರಿಂದ ಅರ್ಜಿಯನ್ನು ಸ್ವೀಕರಿಸಿ ಸಂದರ್ಶನ ನಡೆಸಬೇಕಿತ್ತು. ನಂತರ ಜಿಲ್ಲಾ ನ್ಯಾಯಾಧೀಶರಿಂದ ಅವರ ಪೂರ್ವಪರ ಮಾಹಿತಿಯನ್ನು ಪಡೆದು ನೇಮಕಾತಿ ಮಾಡಬೇಕು ಆದರೆ ಕಾಂಗ್ರೆಸ್ ಪಕ್ಷದ ವಕೀಲರನ್ನು ಈ ಹುದ್ದೆಗೆ ಏಕಾಏಕಿ ನೇಮಕ ಮಾಡಲಾಗಿದೆ ಎಂದು ಪಕ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ-https://suddilive.in/archives/6182