ರಾಜ್ಯ ಸುದ್ದಿಗಳು

ಗೋಕುಲ್ ಮೇಲೆ ಹಲ್ಲೆ ಪ್ರಕರಣ ಎರಡೂ ಕಡೆಯಿಂದ ಪ್ರತಿಭಟನೆ

ಸುದ್ದಿಲೈವ್/ಭದ್ರಾವತಿ

ಭದ್ರಾವತಿಯಲ್ಲಿ ಬಿಜೆಪಿ ಕಾರ್ಯಕರ್ತ ಗೋಕುಲ್ ಮೇಲೆ ಹಲ್ಲೆ ನಡೆದ ಪ್ರಕರಣ ದೂರು ಮತ್ತು ಪ್ರತಿದೂರು ದಾಖಲಾಗಿದ್ದು, ಇಂದು ಒಂದೇ ದಿನ ಎರಡೂ ಕಡೆಯಿಂದ ಪ್ರತಿಭಟನೆ ನಡೆದಿದೆ. ಭದ್ರಾವತಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿದರೆ.

ಇಂದು ಭದ್ರಾವತಿಯ ನಗರಸಭೆ ಕಾರ್ಯಕರ್ತರು ಹಳೇ ನಗರ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿ ತಕ್ಷಣವೇ ಆರೋಪಿಗಳನ್ನ ಬಂಧಿಸುವಂತೆ ಆಗ್ರಹಿಸಿದ್ದಾರೆ. ಒಂದು ವೇಳೆ ಆರೋಪಿಯನ್ನ ಶೀಘ್ರವಾಗಿ ಬಂದಿಸದೆ ಇದ್ದರೆ ನಾಳೆಯಿಂದ ಕಸ ತೆಗೆಯದಂತೆ ಎಚ್ಚರಿಸಿದ್ದಾರೆ.

ಮೊನ್ನೆ ಗೋಕುಲ್ ಮೇಲೆ ಹಲ್ಲೆ ಪ್ರಕರಣದಲ್ಲಿ ನರೇಶ್ ಎಂಬುವರು ಗೋಕುಲ್ ಜಾತಿನಿಂದನೆ ಮಾಡಿದ್ದಾನೆ ಎಂದು ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ನರೇಶ್ ನ್ನ‌ಬೆಂಬಲಿಸಿ ನಗರ ಸಭೆ ಪೌರಕಾರ್ಮಿಕರು ಇಂದು ಪ್ರತಿಭಟಿಸಿದ್ದಾರೆ. ನರೇಶ್ ಪೌರಕಾರ್ಮಿಕ ನಾಗಿರುವುದರಿಂದ ಪ್ರತಿಭಟನೆ ಎರಡು ಮಗ್ಗಲಲ್ಲೂ ಕಾವುಪಡೆದುಕೊಂಡಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆ ಖಂಡಿಸಿ  ಬಿಜೆಪಿ ಹಾಗು ಜೆಡಿಎಸ್ ‌ಕಾರ್ಯಕರ್ತರಿಂದ ಜಂಟಿಯಾಗಿ ಪ್ರತಿಭಟನೆ ನಡೆಸಿದ್ದಾರೆ. ಭದ್ರಾವತಿಯ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕಾಂಗ್ರೆಸ್ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಭದ್ರಾವತಿಯಲ್ಲಿ ಇಸ್ಪೀಟು, ಓಸಿ, ಕ್ರಿಕೆಟ್ ಬೆಟ್ಟಿಂಗ್, ಗಾಂಜಾ ಎಗ್ಗಿಲ್ಲದೇ ನಡೆಯುತ್ತಿದೆ. ಕೆಲವರ ಕುಮ್ಮಕ್ಕಿನಿಂದಲೇ ಭದ್ರಾವತಿಯಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ‌ ಪೊಲೀಸರು ಈ ಕೂಡಲೇ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಲಾಗಿದೆ. ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸುವಂತೆ ಆಗ್ರಹಿಸಲಾಗಿದೆ.

ಇದನ್ನೂ ಓದಿ-https://suddilive.in/archives/4825

Related Articles

Leave a Reply

Your email address will not be published. Required fields are marked *

Back to top button