ಸ್ಥಳೀಯ ಸುದ್ದಿಗಳು

ಕನ್ನಡ ಪರ ಹೋರಾಟ ನಡೆಸಿದವರನ್ನ ಬಿಡುಗಡೆ ಮಾಡುವಂತೆ ಕರವೇ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಕರ್ನಾಟಕದ ಭಾಷೆ ನೆಲ ಜಲದ ಪರ ಹೋರಾಟ ನಡೆಸಿದ  ಕರವೇ ರಾಜ್ಯಾಧ್ಯಕ್ಷ‌ ನಾರಾಯಣ ಗೌಡರವರನ್ನ ಬಂಧಿಸಿರುವುದನ್ನ ಖಂಡಿಸಿಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣ ಶಿವಮೊಗ್ಗ ಘಟಕ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದೆ.

ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಹಾಗೂ ನಾಮಫಲಕ ಶೇಕಡ 60% ಕನ್ನಡವನ್ನು ಕಡ್ಡಾಯವಾಗಿ ಹಾಕಬೇಕು ಎಂದು ಕನ್ನಡಪರ ಹೋರಾಟಗಾರರು ಹೋರಾಟ ಮಾಡುವ ಸಂದರ್ಭದಲ್ಲಿ ನಾರಾಯಣ ಗೌಡರನ್ನ ಮತ್ತು ಇತರೆ ಹೋರಾಟಗಾರರನ್ನು ಬಂಧಿಸಿರುವುದು ಖಙಡನೀಯ ಎಂದು ಸಂಘಟನೆ ಆಗ್ರಹಿಸಿದೆ.

ಬಂಧಿತರನ್ನ ತಕ್ಷಣವೇ ಬಿಡುಗಡೆ ಮಾಡಬೇಕು ಎಂದು  ಆಗ್ರಹಿಸಿರುವ ಸಂಘಟನೆ ಕನಡ್ಡ ನಾಡು ನುಡಿಯನ್ನ ಹತ್ತಿಕ್ಕದಂತೆ ಆಗ್ರಹಿಸಲಾಗಿದೆ. ಪ್ರತಿಭಟನೆಯಲ್ಲಿ, ಜಿಲ್ಲಾಧ್ಯಕ್ಷ ಎಂ.ಜು,  ಪ್ರಧಾನ ಕಾರ್ಯದರ್ಶಿಗಳಾದ ಅಂಬರೀಶ್, ಜಿಲ್ಲಾ ಉಪಾಧ್ಯಕ್ಷರಾದ ಶೈಲೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/5961

Related Articles

Leave a Reply

Your email address will not be published. Required fields are marked *

Back to top button