ಸಚಿವ ಮಧು ಬಂಗಾರಪ್ಪರಿಂದ ವಿವಿಧ ಕಾಮಗಾರಿ ಉದ್ಘಾಟನೆ-ಮುನ್ನೆಲೆಗೆ ಬಂದ ಟೋಪಿ ವಿಚಾರ
ಸುದ್ದಿಲೈವ್/ಶಿವಮೊಗ್ಗ
ಸ್ಮಾರ್ಟ್ ಸಿಟಿ ಮತ್ತು ಮಹಾನಗರ ಪಾಲಿಕೆಯ ವತಿಯಿಂದ ನಿರ್ಮಿಸಲಾಗಿರುವ ಹೂವಿನ ವಾಣಿಜ್ಯ ಮಳಿಗೆ ಮತ್ತು ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಹಾಗೂಪಬ್ಲಿಕ್ ಸೈಕಲ್ ಶೇರಿಂಗ್ ಜಾಗವನ್ನ ಸಚಿವ ಮಧು ಬಂಗಾರಪ್ಪ ಮತ್ತು ಶಾಸಕ ಚೆನ್ನಬಸಪ್ಪ ನೆರವೇರಿಸಿದರು.
ಮೊದಲಿಗೆ ನಗರದ ಎಲ್ ಎಲ್ಆರ್ ರಸ್ತೆಯಲ್ಲರುವ ಹೂವಿನ ಮಳಿಗೆಯನ್ನ 6.20 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಮಳಿಗೆನ್ನ ಪಾಲಿಕೆ ನಿರ್ಮಿಸಿದ್ದು ಸಂಸದ ರಾಘವೇಂದ್ರ, ಶಾಸಕ ಚೆನ್ನಬಸಪ್ಪ ಉದ್ಘಾಟನಾ ಕಾರ್ಯದಲ್ಲಿ ಸಚಿವ ಮಧು ಬಂಗಾರಪ್ಪರಿಗೆ ಸಾಥ್ ನೀಡಿದರು.
ನಂತರ ಬಿ.ಹೆಚ್ ರಸ್ತೆಯಲ್ಲಿ 30 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಟ್ಟಡವನ್ನ ಸಚಿವರು ಮತ್ತು ಶಾಸಕರು ಉದ್ಘಾಟಿಸಿ ಮಳಿಗೆಯನ್ನವೀಕ್ಷಿಸಿದ್ದಾರೆ.
ನಂತರ ಕೋಟೆ ರಸ್ತೆಯಲ್ಲಿರುವ ಪಬ್ಲಿಕ್ ಬೈಕ್ ಶೇರಿಂಗ್ ನ್ನ ಉದ್ಘಾಟಿಸಲಾಗಿದೆ. 4.2 ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಪಬ್ಲಿಕ್ ಬೈಕ್ ಶೇರಿ ಉದ್ಘಾಟಿಸಿದ್ದಾರೆ. ಸೈಕಲ್ ನಲ್ಲಿ ರಿವರ್ ಸೈಡ್ ವೀವ್ ಮಾಡಲು ಅನುಕೂಲವಾಗಲಿದೆ.
ಉದ್ಘಾಟಿಸಿದ ಸಚಿವ ಮಧು ಬಂಗಾರಪ್ಪ ಶಾಸಕ ಚೆನ್ನಬಸಪ್ಪ ಮತ್ತುಮಾಜಿ ಪಾಲಿಜೆ ಸದಸ್ಯ ಹೆಚ್ ಸಿ ಯೋಗೀಶ್ ಧೀರಾಜ್ ಹೊನ್ನವಿಲೆ ಮೊದಲಾದವರು ಸೈಕಲ್ ಪೆಡ್ಲಿಂಗ್ ಮಾಡಿದ್ದಾರೆ. ನಂತರ ನದಿಯಲ್ಲಿ ನಿರ್ಮಾಣ ವಾಗುತ್ತಿರುವ ಬೋಟಿಂಗ್ ಕಾಮಗಾರಿಬವೀಕ್ಷಿಸಿದರು. ಈ ಎಲ್ಲಾ ಕಡೆ ಸ್ಮಾರ್ಟ್ ಸಿಟಿ ಎಂಡಿ ಮಾಯಣ್ಣ ಗೌಡ ಉಪಸ್ಥತಿರಿದ್ದರು.
ಟೋಪಿ ವಿಚಾರ
ನಗರದ ಹೂವಿನ ವಾಣಿಜ್ಯ ಮಳೆಗೆ ಉದ್ಘಾಟನೆಯ ವೇಳೆ ಸಚಿವ ಮಧು ಬಂಗಾರಪ್ಪರಿಗೆ ಸಂಸದ ರಾಘವೇಂದ್ರ ಕ್ಯಾಪ್ ಹಾಕಿದ್ದಾರೆ. ಈ ಕ್ಯಾಪ್ ಹಾಕಿರುವುದನ್ನ ಹಾಸ್ಯವಾಗಿ ತೆಗೆದುಕೊಂಡು ಮಾತನಾಡಿದ ಸಚಿವರು ನೆಹರೂ ಕ್ರೀಡಾಂಗಣದಲ್ಲಿ ಅಂತೂ ನೀವು ಟೋಪಿ ಹಾಕಿಸಿದ್ದೀರಿ ಎಂದು ಹೇಳಿ ನಗಿಸಿದ್ದಾರೆ.
ನಂತರ ಉದ್ಘಾಟನಾ ಶಿಲೆ ಅನಾವರಣವೇಳೆ ಪರದೆ ಸರಿಸುವ ವೇಳೆ ಸಚಿವರು ಮತ್ತು ಸಂಸದರು ಹಾಗೂ ಶಾಸಕರ ನಡುವಿನ ಸಂಭಾಷಣೆಯೂ ಬಹಳ ಸ್ವಾರಸ್ಯಕಾರವಾಗಿತ್ತು ಎಂಬುದನ್ನ ಮರೆಯುವಹಾಗಿಲ್ಲ