ಬಜಾರನ ಎರಡು ವ್ಯಾಪರಸ್ಥರ ನಡುವೆ ಏನಿದು ಗಲಾಟೆ?
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಗಾಂಧಿ ಬಜಾರ್ ನಲ್ಲಿ ಇಬ್ಬರು ವ್ಯಾಪಾರಸ್ಥರ ನಡುವೆ ಮನಸ್ಥಾಪ ಉಂಟಾಗಿ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಇದು ವರೆಗೂ ಗಾಂಧಿ ಬಜಾರ್ ನಲ್ಲಿ ವ್ಯಾಪಾರಸ್ಥರ ನಡುವೆ ಎಫ್ಐಆರ್ ದಾಖಲಾಗಿಲ್ಲ. ಆದರೆ ಮೊದಲ ಬಾರಿಗೆ ಇಬ್ಬರ ನಡುವೆ ಕಸ್ಟಮರ್ ಗಳನ್ನ ಕೂಗಿ ಕರೆದು ವ್ಯಾಪಾರ ಮಾಡಿದ್ದರ ಪರಿಣಾಮ ಗಲಾಟೆಯಾಗಿದೆ.
ಶಿವಮೊಗ್ಗದ ಗಾಂಧಿ ಬಜಾರ್ ನ ಸಿದ್ದಪ್ಪ ಕಾಂಪ್ಲೆಕ್ಸ್ ನಲ್ಲಿರುವ ಅಂಬಿಕಾ ಟ್ರೇಡರ್ಸ್ ಕಂಪನಿ ಮತ್ತು ಎದುರಿನ ಮಳಿಗೆಯಲ್ಲಿರುವ ನರ್ಪತ್ ಲಾಲ್ ರವರ ನಡುವೆ ಗಲಾಟೆಯಾಗಿದೆ. ನರ್ಪತ್ ಲಾಲ್ ಅಂಗಡಿಯವರು ಕಸ್ಟಮರ್ ಗಳನ್ನ ಕರೆದು ನಮ್ಮಅಂಗಡಿಗೆ ಬನ್ನಿ ಎದುರಿನ ಅಂಗಡಿಯಲ್ಲಿವಸ್ತುಗಳು ದುಬಾರಿ ಎಂದು ಕರೆದು ವ್ಯಾಪಾರ ಮಾಡಿದ ವಿಚಾರದಲ್ಲಿ ಗಲಾಟೆಯಾಗಿದೆ.
ಕಸ್ಟಮರ್ ಗಳನ್ನಸೆಳೆದುಕೊಂಡ ವಿಚಾರದಲ್ಲಿ ಅಂಬಿಕಾ ಟ್ರೇಡರ್ಸ್ ಕಂಪನಿಯವರಾದ ಸುರೇಶ್, ಮದನ್ ಎಂಬುವರು ಕೇಳಲು ಹೋದಾಗ ನರ್ಪತ್ ಲಾಲ್ ಪಟೇಲ್, ವಿಮಲಾ, ಕಾಂಚನಾ, ಸಪ್ನ, ಸುಶೀಲಾ ರವರೆಲ್ಲಾ ಸೇರಿ ಅವ್ಯಾಚ್ಯ ಪದ ಬಳಕೆಯಿಂದ ನಿಂದಿಸಿ ಹಲ್ಲೆನಡೆಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಮದನ್ ಗೆ ಚಪ್ಪಲಿಯಿಂದ ಹೊಡೆದಿರುವುದಾಗಿ ಆರೋಪಿಸಲಾಗಿದ್ದು, ಮದನ್ ಅಂಗಡಿಗೆ ಬೆಂಕಿ ಇಟ್ಟು ಸುಡುವುದಾಗಿಯೂ ನರ್ಪತ್ ಲಾಲ್ ಮಗಳು ಲಾಯರ್ ಆಗಿ ಬಂದು ನಿಮ್ಮೆಲ್ಲರ ಮೇಲೆ ದೂರು ದಾಖಲಸುವುದಾಗಿ ದೂರಲಾಗಿದೆ. ಈ ಬಗ್ಗೆ ಅಂಬಿಕಾ ಟ್ರೇಡರ್ಸ್ ನ ಮಾಲೀಕ ದೀಪಾರಾಮ್ ದೂರು ನೀಡಿದ್ದಾರೆ.
ಇದನ್ನೂ ಓದಿ-https://suddilive.in/archives/5860