ಸ್ಥಳೀಯ ಸುದ್ದಿಗಳು
ತೀರ್ಥಹಳ್ಳಿ ಎಳ್ಳು ಅಮವಾಸೆ ಜಾತ್ರೆಗೆ ದಿನಾಂಕ ನಿಗದಿ
ಸುದ್ದಿಲೈವ್/ತೀರ್ಥಹಳ್ಳಿ
ತೀರ್ಥಹಳ್ಳಿಯ ರಾಮದೇವರ ದೇವಸ್ಥಾನದ ಎಳ್ಳು ಅಮವಾಸೆಗೆ ವಿಜೃಂಭಣೆಯಾಗಿ ಆಚರಿಸಲು ಮತ್ತು ಎಳ್ಳು ಅಮವಾಸೆಯನ್ನ ಜನವರಿ.11,12 ಮತ್ತು 13 ರವರೆಗೆ ನಡೆಸಲು ನಿನ್ನೆ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಜನವರಿ 11 ಕ್ಕೆ ಸ್ನಾನ, 12 ರಂದು ಜಾತ್ರೆ ನಡೆದರೆ 13 ರಂದು ದೇವರ ತೆಪ್ಪೋತ್ಸವ ನಡೆಯಲಿದೆ. ಈ ತೆಪ್ಪೋತ್ಸವವನ್ನ ಸಂಭ್ರಮದಿಂದ ನಡೆಸಲು ಯೋಜಿಸಲಾಗಿದೆ. ಸಾರ್ವಜನಿಕರ ದೇಣಿಗೆ ಪಡೆದು ಜಾತ್ರೆ ನಡೆಸಲು ಸಭೆಯಲ್ಲಿ ಯೋಜಿಸಲಾಗಿದೆ.
ಇದನ್ನೂ ಓದಿ-https://suddilive.in/archives/5032