ಕ್ರೈಂ ನ್ಯೂಸ್

ರೈಲಿಗೆ ಸಿಲುಕಿ ವ್ಯಕ್ತಿಯ ಆತ್ಮಹತ್ಯೆ-ಎರಡು ದಿನಗಳಲ್ಲಿ ಇಬ್ಬರು ಅಪರಿಚಿತರು ಸಾವು

ಸುದ್ದಿಲೈವ್/ಭದ್ರಾವತಿ

ರೈಲುಗಾಡಿಗೆ ಸಿಲಿಕಿ ಸಾವನ್ನಪ್ಪಿರುವ ಘಟನೆ ಇಂದೂ ಸಹ‌ನಡೆದಿದೆ. ನಿನ್ನೆ ಭದ್ರಾವತಿ-ಮೊಸರಹಳ್ಳಿ ಬಳಿ ರೈಲುಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿತ್ತು.

ಇಂದು ಸಹ ಇದೇ ರೀತಿಯ ಘಟನೆ ನಡೆದಿದೆ. ನಿನ್ನೆ ಸಹ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ವ್ಯಕ್ತಿಯ ಗುರುತು ಪತ್ತೆಯಾಗಿರಲಿಲ್ಲ. ಇವತ್ತೂ ಸಹ ಭದ್ರಾವತಿಯ ಆಹಾರ ನಿಗಮದ ಬಳಿಯ ರೈಲ್ವೆ ಹಳಿಯ ಮೇಲೆ ಅಪರಿಚಿತನೋರ್ವನ ಶವ ಪತ್ತೆಯಾಗಿದೆ.

ಈತನ ಬಗ್ಗೆನೂ ಗುರುತು ಪತ್ತೆಯಾಗಿಲ್ಲ. ಯಾವ ರೈಲಿಗೆ ಸಿಲುಕಿ ಆತ್ಮಹತ್ಯೆ ಆಗಿದೆ ಎಂಬುದು ಗೊತ್ತಿಲ್ಲ. ಭಧಾವತಿಯ FCI ಆಪೀಸ್ ಎದುರಿರುವ ರೈಲು ಹಳಿಯ ಮೇಲೆ  ಚಪ್ಪಲಿಗಳನ್ನು ಬಿಟ್ಟು ಚಲಿಸುವ ಯಾವುದೊ ರೈಲುಗಾಡಿಗೆ ಏಕಾಏಕಿ ಅಡ್ಡ ಬಂದು ಮೃತಪಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಮೃತ ದೇಹವನ್ನ ಮೆಗ್ಗಾನ್ ಮರಣೋತ್ತರ ಪರೀಕ್ಷೆಯಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತನಿಗೆ 68 ವರ್ಷದ ವಯಸ್ಸಿರಬಹುದು ಎಂದು ಅಂದಾಜಿಸಲಾಗಿದೆ.‌ ನಿನ್ನೆ ಭದ್ರಾವತಿ-ಮೊಸರಹಳ್ಳಿ ಬಳಿ ಸಿಕ್ಕ ಮೃತನಿಗೆ 50 ವರ್ಷ ಎಂದು ಅಂದಾಜಿಸಲಾಗಿತ್ತು.  ಭದ್ರಾವತಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/5344

Related Articles

Leave a Reply

Your email address will not be published. Required fields are marked *

Back to top button