ಮಧು ಮತ್ತು ಕುಮಾರ್ ಬಂಗಾರಪ್ಪ ಒಂದಾಗಲಿ-ಹರತಾಳ ಹಾಲಪ್ಪ
ಸುದ್ದಿಲೈವ್/ಸಾಗರ
ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿರುವಂತೆ ಮಾಜಿ ಸಚಿವ ಹರತಾಳಹಾಲಪ್ಪ ಸಹ ಬಂಗಾರಪ್ಪನವರ ಕುಟುಂಬ ಒಂದಾಗಲಿ ಎಂಬ ಅಭಿಲಾಷೆಯನ್ನ ಹೊರಹಾಕಿದ್ದಾರೆ. ಸಚಿವ ಮಧು ಬಂಗಾರಪ್ಪ ಮತ್ತು ಮಾಜಿ ಸಚಿವ ಕುಮಾರ ಬಂಗಾರಪ್ಪನವರು ಒಂದಾಗಬೇಕೆಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ನಿನ್ನೆ ಸುದ್ದಿಲೈವ್ ನ್ಯೂಸ್ ವೆಬ್ ಸೈಟ್ ನಲ್ಲಿ ಈಡಿಗರ ಸಮಾವೇಶ ಬಲಪ್ರದರ್ಶನಕ್ಕೆ ಮುಂದಾಗಿರುವ ಮಧುಬಂಗಾರಪ್ಪನವರ ಕುಟುಂಬ ಮೊದಲು ಒಂದಾಗಲಿ ನಂತರ 26 ಉಪಪಂಗಡ ಒಂದಾಗಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಎಂದು ಸುದ್ದಿ ಮಾಡಲಾಗಿತ್ತು.
ಇಂದು ಸಾಗರದಲ್ಲಿ ಮಾಜಿ ಸಚಿವ ಹರತಾಳಹಾಲಪ್ಪ ಸಹ ಇವರೆಲ್ಲಾ ಒಂದಾಗಬೇಕು ಎಂಬ ಅಭಿಲಾಷೆ ಹೊರಹಾಕಿದ್ದಾರೆ. ಇದೇ ಯಡಿಯೂರಪ್ಪನವರ ಕುಟುಂಬ ರಾಜಕಾರಣದಲ್ಲಿದ್ದಾರೆ. ದೇವೇಗೌಡರ ಕುಟುಂಬ ರಾಜಕಾರಣದಲ್ಲಿದ್ದಾರೆ. ಆದರೆ ಎಲ್ಲರೂ ಒಟ್ಟಾಗಿದ್ದಾರೆ. ಬಂಗಾರಪ್ಪನವರ ಕುಟುಂಬ ಹೀಗೆ ಒಂದಾಗಲಿ ಎಂದು ಹೇಳಿದರು.
ಅದರಂತೆ ನಾಳೆ ನಡೆಯುವ ಸಮಾವೇಶದಲ್ಲಿ ಈಗ ಈಡಿಗ ಸಮುದಾಯಕ್ಕೆ ಒಂದು ಸಚಿವ ಸ್ಥಾನ ದೊರೆತಿದೆ. ಅದರಂತೆ ಮತ್ತೊಂದು ಸಚಿವ ಸ್ಥಾನ ದೊರೆಯಲಿ ಎಂಬ ಹಕ್ಕೋತ್ತಾಯ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ-https://suddilive.in/archives/4522