ರಾಷ್ಟ್ರೀಯ ಸುದ್ದಿಗಳು

ಭಕ್ತಿ ಪರಕಾಷ್ಠೆಯಲ್ಲಿ ಮಿಂದೆದ್ದ ಭಕ್ತರು

ಸುದ್ದಿಲೈವ್/ಶಿವಮೊಗ್ಗ

ಪ್ರಧಾನಿ ಮೋದಿಯವರ ಒಂದೇ ಒಂದು ಕರೆಗೆ ಇಡೀ ದೇಶವೇ ರಾಮ ಮಂದಿರ ಉದ್ಘಾಟನೆ ಮತ್ತು ರಾಮಲಲ್ಲಾನ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಕ್ತಿ ಪರಕಾಷ್ಠೆಯಲ್ಲಿ ಮಿಂದೆದ್ದಿದೆ.

ಪ್ರಧಾನಿ ಮೋದಿ ಅವರು ಅಯೋಧ್ಯ ರಾಮ ಮಂದಿರ ಉದ್ಘಾಟನೆಗೆ ಜ.22 ಎಂದು ದಿನಾಂಕ ನಿಗದಿ ಮಾಡಿ ಉದ್ಘಾಟನೆಯ ವೇಳೆ ಹತ್ತಿರದ ದೇವಸ್ಥಾನಗಳಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಕರೆ ನೀಡಿದ್ದರು.

ಈ ಕರೆಗೆ ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ ನಡೆದಿದೆ. ಶಿವಮೊಗ್ಗದ ಕೋಟೆ ರಾಮ ಮಂದಿರ, ಬಿಬಿ ಸ್ಟ್ರೀಟ್ ನಲ್ಲಿರುವ ಜೈನ ಮಂದಿರದಲ್ಲಿ ಜನ ಕಿಕ್ಕಿರಿದು ಅಯೋಧ್ಯಾ ರಾಮ ಮಂದಿರ ಉದ್ಘಾಟನೆ ಕಾರ್ಯಕದರಮದಲ್ಲಿ ಭಾಗಿಯಾಗಿದ್ದಾರೆ.

ರಾಮ ಜಪ, ರಾಮ ನಾಮ ಸ್ಮರಣೆ ಮಾಡುವ ಮೂಲಕ ಜನ ನೆರವೇರಿದ್ದಾರೆ. ಕಿಕ್ಕಿರಿದು ನಿಂತು ದೊಡ್ಡ ಎಲ್ ಇಡಿ ಸ್ಕ್ರೀನ್ ಗಳಲ್ಲಿ ವೀಕ್ಷಿಸುತ್ತಿರುವ ದೃಶ್ಯ ಲಭ್ಯವಾಗಿದೆ. ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಅಗಿದ್ದಾರೆ. ನೆರದಿರುವ ಭಕ್ತರಿಗೆ ಪಾನಕ, ಬಾದಾಮಿ ಹಾಲು ಮತ್ತು ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ-https://suddilive.in/archives/7435

Related Articles

Leave a Reply

Your email address will not be published. Required fields are marked *

Back to top button