ಕ್ರೈಂ ನ್ಯೂಸ್

24 ಗಂಟೆಗಳಲ್ಲಿ ಕೊಲೆ ಆರೋಪಿಗಳ ಬಂಧನ

ಸುದ್ದಿಲೈವ್/ಸೊರಬ

ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನ ಸೊರಬ ಪೊಲೀಸರು‌ ಬಂಧಿಸಿದ್ದಾರೆ.

ಡಿ.5 ರಂದು ಸೊರಬ ತಾಲೂಕಿನ ಕಟ್ಟಿನಕೇರಿಯಲ್ಲಿ ರಬ್ಬರ್ ಪ್ಲಾಂಟೇಷನ್ ನಲ್ಲಿ ಕೆಲಸ ಮಾಡುತ್ತಿದ್ದ ಕೇರಳ ನಿವಾಸಿ ಶೀಜು (40) ಎಂಬಾತನನ್ನ ಕೊಲೆ ನಡೆದಿತ್ತು. ಕಾರ್ಮಿಕರ ನಡುವೆಯೇ ನಡೆದಿದ್ದ ಗಲಾಟೆಯಲ್ಲಿ ಶೀಜು ಮರ್ಡರ್ ಆಗಿದ್ದನು.

ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಹಾಗೂ ಶಿಕಾರಿಪುರ DYSP ಮಾರ್ಗದರ್ಶನದಲ್ಲಿ ಸೊರಬ ಸಿಪಿಐ ರಾಜಶೇಖರ್ ನೇತೃತ್ವದಲ್ಲಿ ಪಿಎಸ್ಐ ನಾಗರಾಜ್, ಮತ್ತು ಪಿಎಸ್ಐ ಮಾಳಪ್ಪ ಸಿಬ್ಬಂದಿಗಳಾದ ನಾಗೇಶ್ ದಪೆದಾರ್ ರಾಘವೇಂದ್ರ, ವಿನಯ, ಲೋಕೇಶ್, ಇವರುಗಳ ತಂಡವನ್ನ ರಚಿಸಲಾಗಿತ್ತು‌.

ಆರೋಪಿಗಳಾದ A1 ಜಯನ್ ಸಿ, ತಂದೆ ಚಂದನ್ ತಿರುವಂತಪುರಂ A 2 ಶಿಬು ತಂದೆ ಗೋಪಾಲನ್ ಕಣ್ಣೂರು, A3 ಸುಮನ್ ಕುಮಾರ್ ತಂದೆ ಜ್ಞಾನಮುತ್ತು ತಿರುವಂತ ಪುರಂ ಕೊಲೆ ಆರೋಪಿಗಳನ್ನೂ ಹೊಸನಗರ ಬಳಿಯ ಜಯನಗರ ಬಳಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಕೊಲೆ ನೆಡೆದ ಕೇವಲ 24 ಘಂಟೆಯಲ್ಲಿ ಕೊಲೆ ಆರೋಪಿಗಳನ್ನೂ ಹೆಡೆಮುರಿ ಕಟ್ಟಲು ಯಶಸ್ವಿ ಕಾರ್ಯಾರಣೆಯಲ್ಲಿ ಭಾಗಿಯಾದ ಸೊರಬ ಪೊಲೀಸ್ ತಂಡದ ಕಾರ್ಯಾಚರಣೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್  ಹಾಗೂ ಶಿಕಾರಿಪುರ DYSP ಶಿವಾನಂದ ಮದರಕಂಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-https://suddilive.in/archives/4432

Related Articles

Leave a Reply

Your email address will not be published. Required fields are marked *

Back to top button