ಕ್ರೈಂ ನ್ಯೂಸ್
ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಕಾರಿನ ಚಾಲಕನ ಮೇಲೆ ಹೆಜ್ಜೇನು ದಾಳಿ
ಸುದ್ದಿಲೈವ್/ಶಿವಮೊಗ್ಗ
ಹೆಜ್ಜೇನು ದಾಳಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಅವರ ಕಾರಿನ ಚಾಲಕ ತುತ್ತಾಗಿದ್ದಾರೆ. ಅವರನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ.
ಸರ್ಜಿ ಕನ್ವೆಷನಲ್ ಹಾಲ್ ನಲ್ಲಿ ಮದುವೆ ಕಾರಣ ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್ ಅವರನ್ನ ಅವರ ಇನ್ನೋವ ಕಾರಿನಲ್ಲಿ ಚಾಲಕ ಪ್ರವೀಣ್ ಕರೆದುಕೊಂಡು ಬಂದಿದ್ದಾರೆ.
ಕರೆದುಕೊಂಡ ಪ್ರವೀಣ ಸರ್ಜಿ ಕನ್ವಷನಲ್ ಹಾಲ್ ನ ಮೆಟ್ಟಿಲಿನ ಮೇಲೆ ನಿಂತಿದ್ದಾರೆ. ದಿಡೀರ್ ಅಂತ ಹೆಜ್ಹೇನು ದಾಳಿ ನಡೆಸಿದೆ. ಹೆಜ್ಹೇನು ದಾಳಿಗೆ ಇವರ ಮುಖ ಊದಿಕೊಂಡಿದೆ. ದಾಳಿಗೆ ತುತ್ತಾದ ಪ್ರವೀಣ್ ರನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ.
ಇದನ್ನೂ ಓದಿ-https://suddilive.in/archives/3541