ಸ್ಥಳೀಯ ಸುದ್ದಿಗಳು

ಸಚಿವರ ವಿರುದ್ಧ ಗೋಪಾಲಕೃಷ್ಣ ಬೇಳೂರು ಅಸಮಾಧಾನ

ಸುದ್ದಿಲೈವ್/ಸಾಗರ/ಬೆಂಗಳೂರು

ಸಾಗರದ ಶಾಸಕ ಗೋಪಾಲ ಕೃಷ್ಣ ಬೇಳೂರು ಬೆಂಗಳೂರಿನಲ್ಲಿ ಸಚಿವ ಮಧು ಬಂಗಾರಪ್ಪನವರ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ. ಎಲ್ಲಾ ಉಸ್ತುವಾರಿ ಸಚಿವರು ಚೆನ್ನಾಗಿದ್ದಾರೆ. ಆದರೆ ಮಧು ಬಂಗಾರಪ್ಪ ಮಾತ್ರ ಚೆನ್ನಾಗಿಲ್ಲ ಎಂದು ಗುಡುಗಿದ್ದಾರೆ.

ಮಧು ಬಂಗಾರಪ್ಪ ನಿನ್ನೆ ಸಾಗರದಲ್ಲಿ ಬರಪರಿಶೀಲನ ಸಭೆ ಯನ್ನ ನಡೆಸಿದ್ದಾರೆ. ಸಭೆಗೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಗೈರು ಹಾಜರಿಯಾಗಿದ್ದಾರೆ.ಬೇಳೂರು ಗೈರು ಹಾಜರಿಯನ್ನ ಸಾಗರದ ಪತ್ರಕರ್ತರು ಕೇಳಿದ್ದಕ್ಕೆ ಪತ್ರಕರ್ತರಿಗೂ ಸಚಿವರು ಖಾರವಾಗಿ ನುಡಿದಿದ್ದಾರೆ.

ಇವೆಲ್ಲದರ ನಡುವೆ ಸಚಿವರು ದಿಡೀರ್‌ ಅಂತ ಶಾಸಕರ ಕಚೇರಿಗೆ ಭೇಟಿ ನೀಡಿ ಅಚ್ಚರಿ‌ಮೂಡಿಸಿದ್ದಾರೆ. ಸಚಿವ ಮಧು ಬಂಗಾರಪ್ಪನವರ ದಿಡೀರ್ ಭೇಟಿ ಶಾಸಕರ ಬೆಂಬಲಿಗರು ಸನ್ಮಾನಿಸಿಕಳುಹಿಸಿದ್ದಾರೆ. ಇವೆಲ್ಲದರ ಬೆಳವಣಿಗೆಯ ನಡುವೆ ಶಾಸಕ ಬೇಳೂರು ಇಂದು ಬೆಂಗಳೂರಿನಲ್ಲಿ ಸಚಿವರ ವಿರುದ್ಧ ಮಾತನಾಡಿದ್ದಾರೆ.

ಮಧು ಬಂಗಾರಪ್ಪ ಸರಿಯಾಗಿ ನಡೆದುಕೊಳ್ಳುತ್ತಿಲ್ಲವೆಂದು ಶಾಸಕ ಬೇಳೂರು ಬೆಂಗಳೂರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಧುಗೆ ಅಹಂ ಜಾಸ್ತಿಯಾಗಿದೆ. ಎಲ್ಲಾ ವಿಚಾರಕ್ಕೂ ಮೂಗು ತೂರಿಸುತ್ತಾರೆ. ನಮಗೂ ಜವಬ್ದಾರಿ ಇಲ್ವಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ-https://suddilive.in/archives/4126

Related Articles

Leave a Reply

Your email address will not be published. Required fields are marked *

Back to top button