ಅದು ಉಪ್ಪೋ… ಸೊಪ್ಪೋ… ಎಫ್ ಎಸ್ ಎಲ್ ವರದಿಗೆ ಯಾಕೆ ಕಾಯಲಿಲ್ಲ? ಶಾಸಕ ಚೆನ್ನಬಸಪ್ಪ ಹೇಗೆ ಹೇಳಲು ಕಾರಣವೇನು?
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ದೊರೆತ ಪೆಟ್ಟಿಗೆ ಕುರಿತು ಇಂದು ಶಾಸಕ ಚೆನ್ನಬಸಪ್ಪ ಮತ್ತೆ ಪ್ರಸ್ತಾಪಿಸಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ 60 ಶಾಲೆಗಳಲ್ಲಿ ಬಾಂಬ್ ಬೆದರಿಕೆಯ ಇ-ಮೇಲ್ ಬಂದ ಹಿನ್ನಲೆಯಲ್ಲಿ ಸರ್ಕಾರಕ್ಕೆ ಚಾಟಿ ಬೀಸಿದ್ದು ಹೀಗಿತ್ತು.
ಗೃಹ ಸಚಿವ ಡಾ.ಪರಮೇಶ್ವರ್ ಅವರು ಈ ಹಿಂದೆ ಉಗ್ರರು ಸಿಕ್ಕಾಗ ಅವರನ್ನೆಲ್ಲಾ ಅಮಾಯರು ಎಂದು ಬಿಂಬಿಸಿದ್ದರು. ಅದಾದ ನಂತರ ಶಿವಮೊಗ್ಗದಲ್ಲಿ ದೊರೆತ ವೈಟ್ ಪೌಡರ್ ನ್ನ ತಕ್ಷಣಕ್ಕೆ ಉಪ್ಪಿನ ಪುಡಿ ಎಂದು ಹೇಳಲಾಯಿತು. ಉಪ್ಪೋ… ಸೊಪ್ಪೋ…ಎಫ್ ಎಸ್ ಎಲ್ ವರದಿಗೆ ಯಾಕೆ ಕಾಯಲಿಲ್ಲ. ಆತುರಕ್ಕೆ ಈ ಹೇಳಿಕೆ ಬೇಕಿತ್ತಾ? ಪರಿಶೀಲನೆ ನಡೆಸಿ ತದನಂತರ ಹೇಳಿಕೆ ಕೊಡಬಹುದಿತ್ತು ಎಂದು ಹೇಳಿದರು.
ಹಾಗಾಗಿ ಆರೋಪಿಗಳನ್ನ ಹಿಡಿದರೂ ಸರ್ಕಾರ ಆರೋಪಿಗಳ ಬೆಂಬಲಕ್ಕೆ ನಿಲ್ಲುತ್ತೆ. ಹಾಗಾಗಿ ಆರೋಪಿಗಳಿಗೆ ಈ ರೀತಿ ಬಾಂಬ್ ಬೆದರಿಕೆ ಕರೆ ಬರುತ್ತೆ.ಆರೋಪಿಗಳ ಹೆಡೆ ಮುರಿಕಟ್ಟಬೇಕಿತ್ತು ಆ ಕೆಲಸ ಕಾಂಗ್ರೆಸ್ ಮೊದಲಿನಿಂದಲೂ ಮಾಡಲಿಲ್ಲ. ಸದನದಲ್ಲಿ ಈ ಬಗ್ಗೆ ಮಾತಬಾಡುವೆ ಎಂದರು.
ಇದನ್ನೂ ಓದಿ-https://suddilive.in/archives/4118