ರಾಜಕೀಯ ಸುದ್ದಿಗಳು
ಸಂಸದರೊಂದಿಗೆ ಕಾಂತಣ್ಣ ಧೀರ್ಘಸಮಾಲೋಚನೆ
ಸುದ್ದಿಲೈವ್/ಶಿವಮೊಗ್ಗ
ಸಂಸದ ಬಿ.ವೈ.ರಾಘವೇಂದ್ರ ಹಾಗು ಈಶ್ವರಪ್ಪ ಪುತ್ರ ಕೆ.ಈ.ಕಾಂತೇಶ್ ಚರ್ಚೆ ನಡೆಸಿರುವುದು ಗಮನಸೆಳೆದಿದೆ.
ರಸ್ತೆ ಬದಿ ಗಹನವಾದ ಚರ್ಚೆ ನಡೆಸಿದ ನಾಯಕರು ಟಿಕೇಟ್ ವಿಚಾರ ಮಾತನಾಡುತ್ತಿರಬಹುದೇ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಹಾವೇರಿ – ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿರುವ ಕಾಂತೇಶ್ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರರ ಸ್ವಾಗತಕ್ಕೆ ಕಾಯುವ ವೇಳೆ ಮಾಧ್ಯಮದ ಕಣ್ಣಿಗೆ ಸಂಸದ ರಾಘವೇಂದ್ರ ಮತ್ತು ಈಶ್ವರಪ್ಪನವರ ಪುತ್ರ ಕಾಂತೇಶ್ ಗಹನ ಚರ್ಚೆಯಲ್ಲಿ ಮುಳುಗಿದ್ದಾರೆ.
ಈ ವೇಳೆ ಇಬ್ಬರೇ ರಸ್ತೆ ಬದಿಗೆ ತೆರಳಿ ಚರ್ಚೆ ನಡೆಸುತ್ತಿರುವುದು ಮಾಧ್ಯಮದಲ್ಲಿ ಚರ್ಚೆಗೆ ಆರಂಭವಾಗಿದೆ.