ಡಿಕೆಶಿ ಪ್ರಕರಣ ವಾಪಾಸ್ ನಿಂದ ಹೊಸ ಸಂಸ್ಕೃತಿಗೆ ಕಾಂಗ್ರೆಸ್ ನಾಂದಿ-ಬಿ.ವೈಆರ್
ಸುದ್ದಿಲೈವ್/ಶಿವಮೊಗ್ಗ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೇಸ್ ನ್ನ ಸಿಬಿಐ ನಿಂದ ಹಿಂಪಡೆಯುವಂತೆ ಸಚಿವ ಸಂಪುಟದಲ್ಲಿ ತೀರ್ಮಾನಿಸಿರುವುದು ಕಾಂಗ್ರೆಸ್ ಪಕ್ಷ ಹೊಸ ಸಂಸ್ಕೃತಿಗೆ ನಾಂದಿ ಹಾಡಿದೆ ಎಂದು ಸಂಸದ ರಾಘವೇಂದ್ರ ಆರೋಪಿಸಿದರು.
ಅವರು ಮಾಧ್ಯಮಗಳಿಗೆ ಮಾತನಾಡಿ, ಕ್ಯಾಬಿನೆಟ್ ನಲ್ಲಿ ಸಿಬಿಐಗೆ ನೀಡಿರುವ ಡಿಕೆಶಿ ಪ್ರಕರಣನ್ನ ಹಿಂಪಡೆಯಲು ಕೈಗೊಂಡ ತೀರ್ಮಾನ ಕಾನೂನು ಬಾಹಿರವಾಗಲಿದೆ. ಜೊತೆಗೆ ನ್ಯಾಯಾಂಗ ನಿಂದನೆ ಆಗುವ ಸಾಧ್ಯತೆ ಇದೆ ಎಂದು ಆರೋಪಿಸಿದರು.
ಕಾಂಗ್ರೆಸ್ ತಪ್ಪನ್ನ ಮುಚ್ಚಲು ಯತ್ನಿಸುತ್ತಿದೆ. ಬಿಜೆಪಿಯ ಇಡಿ ಸಿಬಿಐ ದಾಳಿ ನಡೆಸುತ್ತಿರುವುದು ರಾಜಕೀಯ ಪ್ರೇರಿತ ಎಙದು ಗೋಗರೆಯುವ ಕಾಂಗ್ರೆಸ್ ಈಗ ತಪ್ಪನ್ನಮುಚ್ಚಲು ಆ ಪಕ್ಷದ ಮುಖಂಡರು ಮಾಡುತ್ತಿರುವುದೇನು ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರ ಇದ್ದಾಗ ಸಿಬಿಗೆ ಹಸ್ತಾಂತರಿಸಲು ಕಾನೂನು ಪ್ರಕಾರ ಮಾಡಿಲ್ಲ ಎಂದು ಕಾಂಗ್ರೆಸ್ ಪ್ರಕರಣವನ್ನೇ ಹಿಂಪಡೆಯಲು ಸಚಿವ ಪುಟದಲ್ಲಿ ತೀರ್ಮಾನಿಸಿರುವುದು ದುರದೃಷ್ಟಕರ. ನ್ಯಾಯಾಂಗ ತನಿಖೆಯಲ್ಲಿರುವಾಗ ಪ್ರಕರಣ ಹಿಂಪಡೆಯುವ ತೀರ್ಮಾನ ನ್ಯಾಯಾಂಗ ನಿಂದನೆ ಆಗುವ ಸಾಧ್ಯತೆ ಇದೆ ಎಂದರು.
ಇದನ್ನೂ ಓದಿ-https://suddilive.in/archives/3571