ರಾಜಕೀಯ ಸುದ್ದಿಗಳು

ವೈಚಾರಿಕತೆಯ ನೆಲಗಟ್ಟೆಯ ಮೇಲೆ ಪಕ್ಷಕಟ್ಟಿದ್ದೇವೆ-ಶಾಸಕ ಚೆನ್ನಬಸಪ್ಪ

ಸುದ್ದಿಲೈವ್/ಶಿವಮೊಗ್ಗ

ಗೋವಿಂದರಾಜು, ಗೋವಿಂದರೆಡ್ಡಿ, ಶಿವಮೂರ್ತಿಯನ್ನ‌ಕಳೆದುಕೊಂಡು ವೈಚಾರಿಕತೆಯ ನೆಲೆಯ ಮೇಲೆ ಕಟ್ಟಿರುವ ಪಕ್ಷ ಬಿಜೆಪಿ ಎಂದು ಶಾಸಕ ಚೆನ್ನಿ ಅಬ್ಬರಿಸಿದರು.

ನಗರದ ಸೈನ್ಸ್ ಮೈದಾನದಲ್ಲಿ‌ ನಡೆದ ಬಿಜೆಪಿಯ ಪೇಜ್ ಪ್ರಮುಖ್ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿ, 1937 ರಲ್ಲಿ ಕೋಮುಗಲಭೆ ಶಿವಮೊಗ್ಗದಲ್ಲಿ ನಡೆದಿತ್ತು. ಹಾಗಾಗಿ ಕೆಲವರನ್ನ ಕಳೆದುಕೊಂಡು ವೈಚಾರಿಕತೆಯ ನೆಲೆಗಟ್ಟೆಯ ಮೇಲೆ ಪಕ್ಷವನ್‌ ಕಟ್ಟಲಾಗಿದೆ ಎಂದರು.

ಬಿಜೆಪಿ ಶಿವಮೊಗ್ಗ ವಿಧಾನ ಸಭೆ ಕ್ಷೇತ್ರದಿಂದ 1,50,000 ಮತಗಳ ಲೀಡ್ ನ್ನ ರಾಘಣ್ಣನಿಗೆ ಕೊಡಿಸಲಾಗುವುದು. ಕಳೆದ ವರ್ಷ ನಡೆದವಿಧಾನ ಸಭೆ ಚುನಾವಣೆಯಲ್ಲಿ ನನಗೆ 98 ಸಾವಿರ ಮತಗಳನ್ನ ಕೊಟ್ಟಿತ್ತು. ಬಿಜೆಪಿಯಲ್ಲಿ ಈಶ್ವರಪ್ಪ ಇದ್ದ ಕಾರಣಕ್ಕೆ 1,04,000 ಮತಗಳು ಲಭ್ಯವಾಗಿತ್ತು.

ಸಾಮಾನ್ಯ ಕಾರ್ಯಕರ್ತನಾಗಿರುವ ನನಗೆ ಇಷ್ಟು ಮತ ಲಭಿಸಿದರೆ ರಾಘಣ್ಣನಿಗೆ ಈ ಬಾರಿ ಲೀಡನ್ನ ಕೊಡಲು ಆಗೋದಿಲ್ಲವಾ ಎಂದು ಪ್ರಶ್ನಿಸಿದ ಶಾಸಕರು ಹೊರಗಡೆ ನಿಙತವರು ಹೆಚ್ಚಿನ ಮಾತುಗಳನ್ನ ಆಡುತ್ತಿದ್ದಾರೆ. ಬಿಜೆಪಿ ತಕ್ಕ ಉತ್ತರ ಕೊಡಲಿದೆ ಎಂದರು.

ಹೆಚ್ಚಿನ ಮಾತುಗಳನ್ನ ಯಾರು ಆಡುತ್ತಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ. ಇದು ಅಯನೂರು ಮಂಜುನಾಥ್ ಗೆ ಹೇಳಿದ ಮಾತಾ ಅಥವಾ ಈಶ್ವರಪ್ಪನವರೂ ಬಿಎಸ್ ವೈ ಕುಟುಂಬದ ವಿರುದ್ಧ ಮಾತನಾಡುತ್ತಿದ್ದು ಯಾರಿಗೆ ಹೇಳಿದ್ದು ಎಂಬ ಗೊಂದಲ ಮುಂದುವರೆದಿದೆ.

ಇದನ್ನೂ ಓದಿ-https://suddilive.in/archives/11828

Related Articles

Leave a Reply

Your email address will not be published. Required fields are marked *

Back to top button