ಕ್ರೈಂ ನ್ಯೂಸ್

ಭದ್ರಾವತಿಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

ಸುದ್ದಿಲೈವ್/ಭದ್ರಾವತಿ

ಭದ್ರಾವತಿಯ ಬಿ.ಹೆಚ್ ರಸ್ತೆಯಲ್ಲಿರುವ ಭದ್ರ ವೈನ್ ಸ್ಟೋರ್ ಬಳಿ ವ್ಯಕ್ತಿಯೋರ್ವನ ಕೊಲೆಯಾಗಿದ್ದು ಕೊಲೆ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಭದ್ರಾವತಿಯಲ್ಲಿ ಕೊಲೆಯಾದ ವ್ಯಕ್ತಿಯನ್ನ 35 ವರ್ಷದ ಹೇಮಂತ್ ಎಂದು ಗುರುತಿಸಲಾಗಿದೆ. ಬೊಮ್ಮನ ಕಟ್ಟೆಯ ಸತ್ಯಾನಂದ, ಮುಬಾರಕ್ ಯಾನೆ ಮುಬ್ಬು(26), 20 ವರ್ಷದ ಖಲೀಲ್ ಎಂಬುವರು ಕೊಲೆ ಮಾಡಿದ್ದು ಮೂವರನ್ನೂ ಬಂಧಿಸಲಾಗಿದೆ.

ಮೂರು ತಿಂಗಳ ಹಿಂದೆ ಮುಜ್ಜು ಎಂಬಾತನ ಕೊಲೆ ನಡೆದಿತ್ತು. ಈ ಕೊಲೆಯಲ್ಲಿ ಹೇಮಂತನ ಸಹೋದರ ಭಾಗಿಯಾಗಿದ್ದನು. ಈ ಕೊಲೆಯ ಪ್ರತಿಕಾಯ ತೆಗೆದುಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹೇಮಂತ್ ಆಟೋಚಾಲಕನಾಗಿದ್ದು ತಾಲೂಕಿನ ಹಿರಿಯೂರು ಗ್ರಾಮದವನಾಗಿದ್ದನು.

ಇವಿಷ್ಟು ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ. ಪ್ರಕರಣ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ.

ಇದನ್ನೂ ಓದಿ-https://suddilive.in/archives/5108

Related Articles

Leave a Reply

Your email address will not be published. Required fields are marked *

Back to top button