ಕ್ರೈಂ ನ್ಯೂಸ್

ನಕ್ಸಲ್ ಶ್ರೀಮತಿ ಮೂರು ದಿನ ಪೊಲೀಸ್ ಕಸ್ಟಡಿಗೆ

ಸುದ್ದಿಲೈವ್ /ತೀರ್ಥಹಳ್ಳಿ

ನಕ್ಸಲ್ ಹೋರಾಟಗಾರ್ತಿ ಶ್ರೀಮತಿರನ್ನ ಶಿವಮೊಗ್ಗಕ್ಕೆ ಮೊನ್ನೆ ಕರೆತರಲಾಗಿದ್ದು ಇಂದು ತೀರ್ಥಹಳ್ಳಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಲಯ ಮೂರು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ‌

ತೀರ್ಥಹಳ್ಳಿಯ ಕೋರ್ಟ್ ಗೆ ಇಂದು ಕೇರಳದ ತ್ರಿಶೂರ್ ಜೈಲಿನಿಂದ ಬಾಡಿ ವಾರೆಂಟ್ ಮೇಲೆ‌ ಇಂದು ಹಾಜರು ಪಡಿಸಲಾಗಿತ್ತು. ನಿನ್ಬೆ ಶಿವಮೊಗ್ಗದ ಸೋಗಾನೆ ಜೈಲಿಗೆ ನಕ್ಸಲ್ ಶ್ರೀಮತಿ @ ಉನ್ನಿಮಯರನ್ನ ತಂದಿರಿಸಲಾಗಿತ್ತು.

ಇಂದು ಬೆಳಿಗ್ಗೆ 10.30 ಕ್ಕೆ ತೀರ್ಥಹಳ್ಳಿ ಜೆಎಂಎಫ್ ಸಿ ಕೋರ್ಟ್ ಗೆ ಹಾಜರು ಪೊಲೀಸರು ಪಡಿಸಿದರು.
03/12 ಆಗುಂಬೆ ಠಾಣೆಯ ಕೇಸ್ ನಲ್ಲಿ A6 ಆರೋಪಿಯಾದ ಶ್ರೀಮತಿ. 2012 ರ ಜನವರಿ 6 ರಂದು ನಡೆದಿರುವ ಘಟನೆ ಸಂಬಂಧ ಪ್ರಕರಣದ ಪೊಲೀಸ್ ವಿಚಾರಣೆ ನಡೆಯುತ್ತಿದೆ.

ಆಗುಂಬೆಯ ಬರ್ಕಣ ಫಾಲ್ಸ್ ಸಮೀಪ ಕೂಬಿಂಗ್ ನಡೆಸುತ್ತಿದ್ದ ವೇಳೆ ನಡೆದಿದ್ದ ವೇಳೆ ನಕ್ಸಲ್ ಗುಂಪು ಕಾಣಿಸಿಕೊಂಡಿತ್ತು. ಅ್ಯಂಟಿ ನಕ್ಸಲ್ ಫೋರ್ಸ್ ತಂಡದಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ನಕ್ಸಲ್ ಗುಂಪು ಕಾಣಿಸಿಕೊಂಡಿತ್ತು. ಈ ವೇಳೆ ನಕ್ಸಲ್ ಮತ್ತು ಎಎನ್ ಎಫ್ ಟೀಂ ನಡುವೆ ಗಡಿನ ಚಕಮಕಿ ನಡೆದಿದೆ.‌

ಡಿಆರ್ ಪಿಐ ವೇಂಕಟೇಶಪ್ಪ ಎಂಬುವರು ನಕ್ಕಲ್ ದಾಳಿ ನಡೆಸಿದೆ ಎಂದು ದೂರು ನೀಡಿದ್ದರು.‌
ರಿಸರ್ವ್ ಇನ್ಸ್ಪೆಕ್ಟರ್ ದೂರಿನ ಸಂಬಂಧ ಆಗುಂಬೆ ಠಾಣೆಯಲ್ಲಿ ದಾಖಲಾಗಿತ್ತು. ಐಪಿಸಿ, ಯುಎಪಿಎ ಹಾಗೂ ಆಯುಧ ಕಾಯ್ದೆಗಳಡಿ ಪ್ರಕರಣ ದಾಖಲಾಗಿತ್ತು.

ಸದರಿ ಪ್ರಕರಣದಲ್ಲಿ ಇದೀಗ ಶ್ರೀಮತಿ ಕರೆತಂದು, ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.‌

ಇದನ್ನೂ ಓದಿ-https://suddilive.in/archives/10013

Related Articles

Leave a Reply

Your email address will not be published. Required fields are marked *

Back to top button