ಮಗಳ ಸಾವಿಗೆ ನ್ಯಾಯ ಹುಡುಕಿಕೊಂಡು ಬಂದ ತಂದೆ
ಸುದ್ದಿಲೈವ್/ಶಿವಮೊಗ್ಗ
ನಾಲ್ಕು ವರೆ ತಿಂಗಳು ಹಿಂದಿನ ಮಾತು, ತಾನು ಪ್ರೀತಿಸುತ್ತಿದ್ದ ಯುವತಿಗೆ ವಿಷ ಕುಡಿಯಲು ಹೇಳಿ ತಾನು ಕುಡಿದಂತೆ ನಾಟಕವಾಡಿ ಯುವತಿಯ ಸಾವಿಗೆ ಕಾರಣನಾಗಿದ್ದ ಪ್ರಕರಣದಲ್ಲಿ ತನ್ನ ಮಗಳಿಗೆ ನ್ಯಾಯಕೊಡಿಸಲು ತಂದೆ ದೂರದ ಸಿದ್ದಾಪುರ ತಾಲೂಕಿನಿಂದ ಶಿವಮೊಗ್ಗಕ್ಕೆ ಬಂದಿದ್ದರು.
ಜುಲೈ 7 ರಂದು ಸಾಗರದ ಇಂದಿರಾಗಾಂಧಿ ಕಾಲೇಜಿನ ಪ್ರಥಮ ಬಿಎಸ್ಸಿ ಓದುತ್ತಿದ್ದ ಭವ್ಯ ನಾಗ ಹರಿಜನ ಎಂಬ ಯುವತಿಗೆ ಪ್ರದೀಪ್ ಎಂಬ ಯುವಕ ಪರಿಚಯವಾಗಿದ್ದನು. ಇಬ್ಬರ ನಡುವೆ ಪ್ರೀತಿ ಇತ್ತು ಎಂದು ಹೇಳಲಾಗಿತ್ತು. ಆದರೆ ಪ್ರದೀಪ್ ಭವ್ಯಳಿಗೆ ವಿಷ ಕುಡಿಯುವಂತೆ ಪ್ರಚೋದನೆ ನೀಡಿದ್ದನು ಎಂಬ ಆರೋಪ ಕೇಳಿ ಬಂದಿತ್ತು. ವಿಷ ಕುಡಿದ ಭವ್ಯ ಜುಲೈ 15 ರಂದು ಮಣಿಪಾಲಿನಲ್ಲಿ ಸಾವನ್ನಪ್ಪಿದ್ದಳು.
ಈ ಪ್ರಕರಣದಲ್ಲಿ ಪ್ರದೀಪ್ ಗೆ ಜಾಮೀನು ದೊರೆತಿದೆ. ಮಾಡಿದ ಅಪರಾಧಕ್ಕೆ ಕಂಬಿಗಳ ಹಿಂದೆ ಕುಳಿತುಕೊಳ್ಳಬೇಕಿದ್ದ ಯುವಕ ದಿಮ್ ರಂಗ ಎಂದು ಎದೆ ಉಬ್ಬಿಸಿಕೊಂಡು ಓಡಾಡುತ್ತಿದ್ದಾನೆ. ನನ್ನ ಮಗಳಿಗೆ ವಿಷ ಕುಡಿಸಿ ಆತ ಆರಾಮಾಗಿ ಜೀವನ ನಡೆಸುತ್ತಿದ್ದಾನೆ. ಈತನಿಗೆ ಬಿಗ್ ರಿಲೀವ್ ಸಿಗಲು ಗ್ರಾಮದ ಪ್ರಬಲ ರಾಜಕಾರಣಿಗಳ ಕೈವಾಡವಿದೆ ಎಂದು ಇವತ್ತು ಐಬಿಗೆ ಎಡಿಜಿಪಿಯನ್ನ ಹುಡುಕಿಕೊಂಡು ಬಂದಿದ್ದ ಭವ್ಯಳ ತಂದೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಇಂದು ಶಿವಮೊಗ್ಗದ ಐಬಿಗೆ ಎಡಿಜಿಪಿ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ತಿಳಿದು ನೂರು ಕಿಮಿ ದೂರದಿಂದ ಬಂದ ತಂದೆ ನಾಗ ಎಂ ಚೆನ್ನಯ್ಯ ನನ್ನ ಮಗಳ ಸಾವಿಗೆ ನ್ಯಾಯ ಬೇಕು ಎಂದು ಆಗ್ರಹಿಸಿದ್ದಾರೆ. ಪ್ರಕರಣ ನಡೆದು ನಾಲ್ಕು ತಿಂಗಳು ನಡೆದರೂ ಪೊಲೀಸರು ಚಾರ್ಚ್ ಶೀಟ್ ಹಾಕಿಲ್ಲವೆಂಬ ಆರೋಪವನ್ನೂ ಮಾಡಿದ್ದಾರೆ.
ಇದನ್ನೂ ಓದಿ-https://suddilive.in/archives/3477