ಮಹಾನಗರ ಪಾಲಿಕೆ ಸ್ವೀಪ್ ಸಮಿತಿಯಿಂದ ಮತಜಾಗೃತಿ ಕಾರ್ಯಕ್ರಮ
ಸುದ್ದಿಲೈವ್/ಶಿವಮೊಗ್ಗ
ಲೋಕಸಭಾ ಚುನಾವಣೆ ಸಂಬಂದ ದಿನಾಂಕ ನಿನ್ನೆ ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ SVEEP ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು.
ನಗರದ ಡಾ|| ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದ ಆವರಣದಲ್ಲಿ ವಿಶೇಷ ಚೇತನರಿಗೆ ಪಾಸ್ ಇನ್ ದ ಬಾಲ್ ಆಟ ಆಡಿಸುವ ಮೂಲಕ ಹಾಗೂ ಅಂದ ಕಲಾವಿದ ಬಸವರಾಜ್ ರವರ ತಂಡದಿಂದ ಮತದಾನ ಜಾಗೃತಿ ಗೀತೆಗಳನ್ನು ಹಾಡಿಸುವ ಮೂಲಕ ಮತಜಾಗೃತಿ ಮೂಡಿಸಲಾಯಿತು.
ಹಾಗೂ ವಿಜೇತರಿಗೆ ಬಹುಮಾನ ವಿತರಣೆ ಮಾಡುವ ಮುಖಾಂತರ, ಮತ್ತು ನೇಸರ ಕಲಾ ತಂಡದಿಂದ ಮತದಾನದ ಜಾಗೃತಿ ಬೀದಿ ನಾಟಕ ಮಾಡಿಸುವ ಮಾಲಕ ಮತದಾನ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಐಕಾನ್ ಅದ ಶ್ರೀರಜತ್ ದೀಕ್ಷಿತ್ ಮತದಾನದ ಬಗ್ಗೆ ಮಾತನಾಡಿದರು, ವಿಕಲ ಚೇತನ ಅಧಿಕಾರಿ ಶ್ರೀಮತಿ ಶಶಿರೇಖಾ, ಪಾಲಿಕೆ ಸ್ವೀಪ್ ನೋಡಲ್ ಅಧಿಕಾರಿಗಳು
ಹಾಗೂ ಸ್ವೀಪ್ ತಂಡದ ಅಧಿಕಾರಿ ಸಿಬ್ಬಂಧಿಗಳು ಹಾಜರಿದ್ದರು. ಜಿಲ್ಲಾ ಪಂಚಾಯತ್ ಮತ್ತು ಮಹಾನಗರ ಪಾಲಿಕೆ ವತಿಯಿಂದ ನನ್ನ ನಡೆ ಮತಗಟ್ಟೆ ಕಡೆ ಕಾರ್ಯಕ್ರಮವನ್ನು ಕಲಾ ಮತ್ತು ವಾಣಿಜ್ಯ ಕಾಲೇಜ್ ನ ಬೂತ್ ಸಂಖ್ಯೆ ಯಲ್ಲಿ ಆಯೋಜಿಸಲಾಯಿತು.
ಇದನ್ನೂ ಓದಿ-https://suddilive.in/archives/13308