ಎರಡು ಪ್ರತ್ಯೇಕ ಅಪಘಾತ ಮೂವರು ಸಾವು
ಸುದ್ದಿಲೈವ್/ಶಿವಮೊಗ್ಗ/ಸೊರಬ
ಎರಡು ಪ್ರತ್ಯೇಕ ರಸ್ತೆ ಅಪಘಾತ ಸಂಭವಿಸುದ್ದು ಎರಡು ಅಪಘಾತದಲ್ಲಿ ಮೂವರು ಅಸುನೀಗಿದ್ದಾರೆ. ಆನವಟ್ಟಿ ಮತ್ತು ಹೊಳೆಹೊನ್ನೂರಿನಲ್ಲಿ ಘಟನೆ ನಡೆದಿದೆ.
ಹೊಳೆಹೊನ್ನೂರು ನಿನ್ನೆ ಬಳಿ ಅಗರದ ಹಳ್ಳಿ ಬಳಿ ಲೈಟ್ ಕಂಬಕ್ಕೆ ಡಿಕ್ಕಿಹೊಡೆದ ಪರಿಣಾಮ ಇಬ್ಬರು ಯುವಕರು ಸಾವುಕಂಡಿದ್ದಾರೆ. ಸಾವಾಗಿದ್ದ ಅಜ್ಜಿಯನ್ನ ನೋಡಲು ಹೋಗುವ ವೇಳೆ ಅಪಘಾತ ಉಂಟಾಗಿದ್ದು ಇಬ್ಬರು ಸಾವಾಗಿದ್ದಾರೆ.
ಧನುಶ್ 24 ಆತನ ಸ್ನೇಹಿತ ಪವನ್ (29) ಜೊತೆ ಬೈಕ್ ನಲ್ಲಿ ಹೋಗುವಾಗ ಮುಂದೆಸಾಗುತ್ತಿದ್ದ ವಾಹನವನ್ನ ಓವರ್ಟೇಕ್ ಮಾಡಲು ಹೋಗಿ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಬೆಂಗಳೂರಿನಿಂದ ಚಿತ್ರದುರ್ಗದಿಂದ ಬರುವ ವೇಳೆ ಅಪಘಾತ ಉಂಟಾಗಿದೆ. ಧನುಶ್ ಸ್ಥಳದಲ್ಲೇ ಸಾವಾದರೆ ಪವನ್ ರನ್ನ ಮೆಗ್ಗಾನ್ ಗೆ ಸಾಗಿಸುವಾಗ ಸಾವಾಗಿದೆ. ನಾಲೂರಿನ ಮಾಜಿ ಗ್ರಾಪಂ ಅಧ್ಯಕ್ಷೆಯ ಸಾವಿಗೆ ಹೋಗುವಾಗ ಈ ಘಟನೆ ನಡೆದಿದೆ.
ಧನುಶ್ ಮತ್ತು ಪವನ್ ಅಪಘಾತದಲ್ಲಿ ಸಾವುಕಂಡಿದ್ದಾರೆ. ಇಬ್ಬರು ಯುವಕರು ತೀರ್ಥಹಳ್ಳಿ ನಿವಾಸಿಯಾಗಿದ್ದಾರೆ. ಹೊಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಅದೇ ರೀತಿ ಆನವಟ್ಟಿಯಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಚಿಕ್ಕಂಶಿ ಹೊಸೂರು ನಿವಾಸಿಯ ಕಾರ್ತಿಕ್ ಎಂಬುವರು ಸಾವನ್ನಪ್ಪಿದ್ದಾರೆ. ಇನ್ನಿಬ್ಬರಿಗೆ ಗಾಯಗಳಾಗಿವೆ.
ಇದನ್ನೂ ಓದಿ-https://suddilive.in/archives/13151