ನಿಮ್ಮ ಪರಿಸ್ಥಿತಿ ಏನಿದೆ ಅಂತ ನಿಮಗೆ ಅರಿವಾಗಿದೆ, ಪಕ್ಷಕ್ಕೆ ವಾಪಾಸಾಗಿ-ಆರಗ ಜ್ಞಾನೇಂದ್ರ ಕಿವಿಮಾತು
ಸುದ್ದಿಲೈವ್/ಶಿವಮೊಗ್ಗ
ಕೆಲ ಬೂತ್ ಗಳಲ್ಲಿ ಈಶ್ವರಪ್ಪನವರಿಗೆ ಚೀಟಿ ಹಿಡಿಯಲು ಏಜೆಂಟರುಗಳೆ ಇಲ್ಲ. ಈಗಾಗಲೇ ಜಿಲ್ಲೆಯಲ್ಲಿ ಈಶ್ವರಪ್ಪ ಸುತ್ತಾಡಿದ್ದಾರೆ. ಪಕ್ಷದ ಹಿರಿಯರಿದ್ದಾರೆ ಸ್ಪರ್ಧೆಯಿಂದ ಹಿಂದೆ ಸರಿಯಿರಿ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಬುದ್ದಿಮಾತನ್ನ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿ, ನಾನು ಅವರ ಗರಡಿಯಲ್ಲೇ ಬೆಳದವನು. ಬೂತ್ ಗಳಲ್ಲಿ ಈಶ್ವರಪ್ಪನವರ ಚೀಟಿ ಹಿಡಿಯಲು ಏಜೆಂಟ್ ಗಳಿಲ್ಲ. ಜಿಲ್ಲೆ ಸುತ್ತಾಡಿದ್ದೀರಿ. ನಿಮ್ಮ ಪರಿಸ್ಥಿತಿ ಏನಾಗಿದೆ ಗೊತ್ತಿದೆ. ನೀವು ಸೋಲೋದು ನನಗೆ ಇಷ್ಟ ಇಲ್ಲ ಸ್ಪರ್ಧೆಯಿಂದ ಹಿಂದೆ ಸರಿದು ಪಕ್ಷಕ್ಕೆ ವಾಪಾಸ್ ಆಗಿ ಎಂದು ಸಲಹೆ ನೀಡಿದರು.
ನಿಮ್ಮ ಹೋರಾಟ ಆಂತರಿಕವಾಗಿರಲಿ. ಅವರು ಗೆದ್ದು ಮೋದಿ ಕೈಜೋಡಿಸುವುದಾಗಿ ಹೇಳಿಕೊಂಡಿದ್ದಾರೆ. ಆದರೆ ರಾಘಣ್ಣರನ್ನ ಸೋಲಿಸಲು ನಿಮಗೆ ಆಗೋದಿಲ್ಲ ಎಂದು ಕಿವಿಮಾತನ್ನ ಹೇಳಿದರು.
ಕಾಂಗ್ರೆಸ್ ನ ಬೆಂಬಲ ಯಾರಿಗೆ ಗೊತ್ತು?
ವಿಧಾನ ಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಲಾಯಿತು. ರಾಮೇಶ್ವರಂ ಕೆಫೆಯಲ್ಲಿ ಬಾಂಬಿಡಲಾಯಿತು. ಆದರೆ ಏನೂ ಆಗಿಲ್ಲ ಎಂಬ ವರ್ತನೆ ಕಾಂಗ್ರೆಸ್ ಪಕ್ಷದ್ದಾಗಿದೆ. ನಿನ್ನೆ ಜೈಶ್ರೀರಾಮ್ ಎಂಬ ಘೋಷಣೆ ಕೂಗಲಾಯಿತು. ಕೂಗಿದವರ ಹಲ್ಲೆಯಾಗಿದೆ. ಹಲ್ಲೆ ಮಾಡಿದವರ ಪ್ರಕರಣ ದಾಖಲಿಸಿ ನಂತರ ಠಾಣೆಯಿಂದ ಬಿಡುಗಡೆ ಮಾಡಲಾಗುತ್ತದೆ. ಇದರಿಂದ ಕಾಂಗ್ರೆಸ್ ನ ಮನಸ್ಥಿತಿ ಏನೆಂದು ಅರ್ಥವಾಗಲಿದೆ ಎಂದರು.
ಇದನ್ನೂ ಓದಿ-https://suddilive.in/archives/13087