ರಾಜ್ಯ ಸುದ್ದಿಗಳು

ಈಶ್ವರಪ್ಪನವರ ಚುನಾವಣೆ ಸ್ಪರ್ಧೆಗೆ ಮಹಿಳೆಯಿರಿಂದ ಠೇವಣಿ ಹಣ

ಸುದ್ದಿಲೈವ್/ಶಿವಮೊಗ್ಗ

ಈಶ್ವರಪ್ಪನವರು ನಾಳೆ ನಾಮಪತ್ರ ಸಲ್ಲಿಸುತ್ತಿದ್ದು ಅವರ ಸ್ಪರ್ಧೆಗೆ ಠೇವಣಿಯಾಗಿ ಮಾಜಿ ಕಾರ್ಪೊರೇಟರ್ ಸುವರ್ಣ ಶಂಕರ್ ನೇತೃತ್ವದ ಮಹಿಳೆಯರಿಂದ 25 ಸಾವಿರ ರೂ. ಹಣವನ್ನ ನೀಡಾಯಿತು.

ನಾಳೆ ಏ.12 ರಂದು ಮಾಜಿ ಡಿಸಿಎಂ ಈಶ್ವರಪ್ಪ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಚುನಾವಣೆ ಸ್ಪರ್ಧಿಸಲು 25 ಸಾವಿರ ರೂ. ಹಣ ಠೇವಣಿ ಇಟ್ಟು ಸ್ಪರ್ಧಿಸಬೇಕು. ಈ ಹಣವನ್ನ ಮಹಿಳೆಯರು ನೀಡಿ ಈಶ್ವರಪ್ಪನವರ ಚುನಾವಣೆ ಸ್ಪರ್ಧೆಗೆ ಸಹಕರಿಸಿದ್ದಾರೆ.

ಹಣ ಸ್ವೀಕರಿಸಿ ಮಾತನಾಡಿದ ಈಶ್ವರಪ್ಪ ಭೀಮನಕಟ್ಟೆಯ ಸ್ವಾಮೀಜಿ ಒಂದು ಸಾವಿರ ರೂ. ನೀಡಿದ್ದಾರೆ. ಮಹಿಳೆಯರು 24 ಸಾವಿರ ನೀಡಿದ್ದಾರೆ. ಸಾಧು ಸಂತರಿಂದ ಮತ್ತು ಮಹಿಳೆಯರ ಆಶೀರ್ವಾದದಿಂದ ಈ ಬಾರಿ ಗೆದ್ದು ಬರ್ತೀನಿ ಎಂದು ಈಶ್ವರಪ್ಪ ತಿಳಿಸಿದರು.

ಇದನ್ನೂ ಓದಿ-https://suddilive.in/archives/12523

Related Articles

Leave a Reply

Your email address will not be published. Required fields are marked *

Back to top button