ಕೆಎಫ್ ಡಿಗೆ ಜಿಲ್ಲೆಯಲ್ಲಿ ಮೊದಲ ಬಲಿ..?
ಸುದ್ದಿಲೈವ್/ಶಿವಮೊಗ್ಗ
ಕೆಎಫ್ ಡಿ ಕಾಯಿಲೆಯಿಂದ ಬಳುತ್ತಿದ್ದ ಹೊಸನಗರ ತಾಲೂಕಿನ ಅರಮನೆಕೊಪ್ಪ ಗ್ರಾಮದ ಯುವತಿ ಸಾವನ್ನಪ್ಪಿರುವ ಸುದ್ದಿ ಹರಿದಾಡಿದೆ. ಒಂದು ವೇಳೆ ಯುವತಿ ಅಸನೀಗಿದ್ದಲ್ಲಿ. ಜಿಲ್ಲೆಯಲ್ಲಿ 2024 ನೇ ವರ್ಷದ ಕೆಎಫ್ ಡಿ ಖಾಯಿಲೆಗೆ ಮೊದಲ ಬಲಿಯಾದ ಪ್ರಕರಣ ದಾಖಲಾಗಲಿದೆ.
ಜ. ೧ ರಂದು ಮೆಗ್ಗಾನ್ ಗೆ ಮೆದುಳು ಜ್ವರ ಎಂದು ದಾಖಲಾಗಿದ್ದ ಯುವತಿಗೆ ಎರಡನೇ ಬಾರಿ ಆರ್ ಟಿ ಪಿಸಿಆರ್ ಪರೀಕ್ಷೆಗೆ ಒಳಪಡಿಸಿದಾಗ ಕೆಎಫ್ ಡಿ ಪಾಸಿಟಿವ್ ಎಂದು ವರದಿ ಬಂದಿತ್ತು. ಜ.5 ರಂದು ಆಕೆಯನ್ನ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಮಣಿಪಾಲ್ ಆಸ್ಪತ್ರೆಯಲ್ಲಿ ಪರೀಕ್ಷೆ ಒಳಪಡಿಸಿದಾಗ ಕೆಎಫ್ ಡಿ ಕಾಯಿಲೆ ಪತ್ತೆಯಾಗಿತ್ತು. ಮಣಿಪಾಲಿನಲ್ಲೇ ಚಿಕಿತ್ಸೆ ನೀಡಿದಾಗ್ಯೂ ಸಹ ಚಿಕಿತ್ಸೆ ಫಲಕಾರಿಯಾಗಿಲ್ಲ ಎಂಬ ಮಾಹಿತಿ ಕೇಳಿ ಬರುತ್ತಿದೆ.
ಆದರೆ ಶಿವಮೊಗ್ಗದ ಡಿಹೆಚ್ ಒ ಡಾ.ರಾಜೇಶ್ ಸುರಗೀಹಳ್ಳಿ ನಮ್ಮ ತಂಡ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ವರದಿ ನೀಡಲಿದೆ. ನಂತರವೇ ಮಾಹಿತಿ ನೀಡಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ-https://suddilive.in/archives/6396