ಕ್ರೈಂ ನ್ಯೂಸ್

ಯುವತಿ ನಾಪತ್ತೆಯಾಗಿದ್ದು ಯಾಕೆ? ಸಿಕ್ಕರೆ ಠಾಣೆಗೆ ತಿಳಿಸಿ

ಸುದ್ದಿಲೈವ್/ಶಿವಮೊಗ್ಗ

ಮದುವೆಗಾಗಿ ವರನನ್ನ ಹುಡುಕಿಕೊಂಡು ಹೋಗಿದ್ದ ಯುವತಿ ಮಿಸ್ಸಿಂಗ್ ಆಗಿದ್ದಾಳೆ. ಬ್ರೋಕರ್ ನಾಲ್ಕುಜನ ಮಾರವಾಡಿವರನ್ನ ತೋರಿಸುವುದಾಗಿ ಹೇಳಿ ಓರ್ವನನ್ನ ತೋರಿಸಿದ್ದಾನೆ.

ನಾಲ್ಕು ಜನರನ್ನ ತೋರಿಸಿದ ಮೇಲೆ ಅಭಿಪ್ರಾಯ ತಿಳಿಸುವುದಾಗಿ ಹೇಳಿ ಸ್ವಿಚ್ ಆಫ್ ಮಾಡಿಕೊಂಡ ಯುವತಿಯ ತಂದೆಗೆ ಕರೆ ಮಾಡಿದ ಅಪರಿಚಿತರು ನಿಮ್ಮ ಮಗಳು ನಮ್ಮ ಜೊತೆ ಇದ್ದಾಳೆ ಎಂದು ತಿಳಿಸಿರುವುದು ಪೋಷಕರಲ್ಲಿ ಆತಂಕ ಹೆಚ್ಚಿಸಿದೆ.

ದಾವಣಗೆರೆ ಜಿಲ್ಲೆ, ಹೊನ್ನಾಳಿ ತಾಲ್ಲೂಕು ಚಿಕ್ಕ ಗೋಣಿಗೆರೆ ವಾಸಿ ಗಂಗಪ್ಪ ಬಿ.ಜಿ ಎಂಬುವವರ ಮಗಳು ಜ್ಯೋತಿ ಎಂಬ 32 ವರ್ಷದ ಯುವತಿ ಮಾ. 27 ರಿಂದ ಕಾಣೆಯಾಗಿದ್ದಾಳೆ. ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿ ಹೊನ್ನಾಳಿಗೆ ಬಂದಿರುತ್ತಾಳೆ.

ಮದುವೆಯಾಗದ ಯುವತಿಯು ತನ್ನ ತಂದೆಗೆ ತರೀಕೆರೆಯಲ್ಲಿ ಬ್ರೋಕ್ ಒಬ್ಬ ಪರಿಚಯವಿದ್ದಾನೆ. ಆತನನ್ನ ಭೇಟಿಯಾದರೆ ವರಗಳು ಗೊತ್ತಾಗಯತ್ತವೆ ಎಂದು ಹೇಳಿ ಹೊನ್ನಾಳಿಯಿಂದ ತಂದೆ ಜೊತೆ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ.

ಮಧ್ಯಾಹ್ನ ತಂದೆಗೆ ಊರಿಗೆ ವಾಪಾಸ್ ಹೋಗಿ ನಾನು ಕರೆ ಮಾಡುವೆ ಎಂದು ಹೇಳಿದ್ದಾಳೆ.
ಮಾ. 29 ರಂದು ಯಾರೋ ಅಪರಿಚಿತರು ಯುವತಿ ತಂದೆಯವರಿಗೆ ಪೊಲೀಸ್ ಮಾಡಿ ನಿಮ್ಮ ಮಗಳು ನಮ್ಮೊಂದಿಗೆ ಇರುತ್ತಾರೆಂದು ಹೇಳಿ, ಯಾಕೆ ಏನು ಎಂದು ತಿಳಿಸದೇ ಸ್ವಿಚ್‍ಆಪ್ ಮಾಡಿರುತ್ತಾಳೆ.

ಜ್ಯೋತಿ ಚಹರೆ:- 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕನ್ನಡ ತೆಲಗು ಭಾಷೆ ಮಾತನಾಡುತ್ತಾರೆ, ತೆಳು ನೀಲಿ ಬಣ್ಣದ ಜೀನ್ಸ್ ಹಾಗೂ ತೆಳು ನೀಲಿ ಬಣ್ಣದ ಟೀ ಶರ್ಟ್ ಧರಿಸಿರುತ್ತಾರೆ. ಈ ಯುವತಿಯ ಮಾಹಿತಿ ಸಿಕ್ಕಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414 / 9611761255 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಇದನ್ನೂ ಓದಿ-https://suddilive.in/archives/12149

Related Articles

Leave a Reply

Your email address will not be published. Required fields are marked *

Back to top button