ರಾಜಕೀಯ ಸುದ್ದಿಗಳು

ಕಾಂಗ್ರೆಸ್ ಸಂಸ್ಕೃತಿ ಹೀನ ಪಕ್ಷ-ದತ್ತಾತ್ರಿ ವಾಗ್ದಾಳಿ

ಸುದ್ದಿಲೈವ್/ಶಿವಮೊಗ್ಗ

ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷ ಎರಡೂ ಸಹ ಸಂಸ್ಕೃತಿ ಹೀನದಂತೆ ನಡೆದುಕೊಳ್ಳುತ್ತಿದೆ ಎಂದು ಬಿಜೆಪಿಯ ಮುಖಂಡ‌ ದತ್ತಾತ್ರಿ ಆರೋಪಿಸಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ಮೋದಿ ವಿರುದ್ಧ ಮಾತನಾಡಿರುವುದು ಹೇಯ ಸಂಗತಿ. ಇದಕ್ಕೆ ಡಿಸಿಎಂ ಡಿಕೆಶಿ ಅವರು ಆಡುವ ಭಾಷೆಯಲ್ಲಿ ತಂಗಡಗಿ ಮಾತಾಡಿರುವುದಾಗಿ ಸರ್ಥಿಸಿಕೊಂಡಿದ್ದಾರೆ. ಇವೆಲ್ಲವೂ ಪಕ್ಷದ ಸಂಸ್ಕೃತಿಯನ್ನ ಎತ್ತಿ ಹಿಡಿಯುತ್ತದೆ ಎಂದರು.

ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ,ಪ್ರಿಯಾಂಕ ವಾದ್ರಾ ಇವರೆಲ್ಲಾ ಮೋದಿ ವಿರುದ್ಧ ಮಾತನಾಡುವುದು ಹೊಸದಲ್ಲ. ಇದರ ಮುಂದು ವರಿಕೆಯನ್ನ ತಂಗಡಗಿ ತೋರಿದ್ದಾರೆ ಎಂದರು.

ಒಂದು ಲಕ್ಷದ 50 ಸಾವಿರ ಉದ್ಯೋಗ ಪತ್ರವನ್ನ ಫೆಬ್ರವರಿಯಲ್ಲಿ ನೀಡಲಾಗಿದೆ. ಮೋದಿ ಜನರಿಗೆ ಹೊಸ ಬದಲಾವಣೆ ನೀಡಿದ್ದಾರೆ. ರೈತರು, ಯುವಕರು, ಮಹಿಳೆಯರು, ಕಾರ್ಮಿಕರ ಹೆಸರಿನಲ್ಲಿ ಚತುರ್ಭುಜ್ ಯೋಜನೆ ನೀಡಿ ಬೆನ್ನೆಲುಬಾಗಿದ್ದಾರೆ ಎಂದರು.

ಮೋದಿ ಮೋದಿ ಎಂದವರಿಗೆ ಕಪಾಲಕ್ಕೆ ಹೊಡೆಯಿರಿ ಎಂದಿರುವ ಸಚಿವ ಶಿವರಾಜ್ ತಂಗಡಗಿಯವರು ಕ್ಷಮೆಯಾಚಿಸಬೇಕು ಇಲ್ಲ ರಾಜ್ಯಪಾಲರು ಮದ್ಯಪ್ರವೇಶಿಸಿ ಸೂಕ್ತ ನಿರ್ದೇಶನ ನೀಡುವಂತೆ ಆಗ್ರಹಿಸಿದರು.

ಇದನ್ನೂ ಓದಿ-https://suddilive.in/archives/11565

Related Articles

Leave a Reply

Your email address will not be published. Required fields are marked *

Back to top button