ಕ್ರೈಂ ನ್ಯೂಸ್

ಪ್ರಶಾಂತ್ ಸಧ್ಯಕ್ಕೆ ಪ್ರಾಣಾಪಾಯದಿಂದ ಪಾರು

ಸುದ್ದಿಲೈವ್/ಶಿವಮೊಗ್ಗ

ಹಂತಕರು ಬೀಸಿದ ಮಚ್ಚು ಪ್ರಶಾಂತ್ ನ ತಲೆಯೊಳಗೆ ಹೊಕ್ಕಿತ್ತು. ಮಾ.17 ರಂದು ರಾತ್ರಿ ಸ್ನೇಹಿತರೊಂದಿಗೆ ಊಟಕ್ಕೆ ತೆರಳಿದ್ದ ಪ್ರಶಾಂತ್ ಮೇಲೆ ಬೀಸಿದ್ದ ಲಾಂಗು ಆತನ ನೆತ್ತಿಯಲ್ಲಿ ತೂಗುಗತ್ತಿಯಾಗಿ ಕೂತಿತ್ತು.

ಸತತ ನಾಲ್ಕು ಗಂಟೆಗಳ ಕಾಲ ನೆತ್ತಿಯ ಮೇಲೆ ಸಿಕ್ಕಿಕೊಂಡಿದ್ದ ಲಾಂಗುನ್ನ ತೆಗೆದು ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಶಸ್ತ್ರ ಚಿಕಿತ್ಸೆ ಸಧ್ಯಕ್ಕೆ ಯಶಸ್ವಿಯಾಗಿದೆ.‌ ಪತ್ನಿಯನ್ನ ಮೊದಲ ಬಾರಿಗೆ ಕಂಡ ಪ್ರಶಾಂತ್ ಐ ಲವ್ ಯು ಎಂದಿರುವುದು ಕುಟುಂಬಕ್ಕೆ ಇನ್ನಿಲ್ಲದ ಸಂತೋಷದಲ್ಲಿ ತೇಲಿಸಿದೆ.

ಪ್ರಶಾಂತ್

ಮಾ.17 ರಂದು ಬಾರ್ ಬೈಂಡಿಂಗ್ ಕೆಲಸ ಮುಗಿಸಿಕೊಂಡು ಪ್ರಶಾಂತ್ ತನ್ನ ಸ್ನೇಹಿತರೊಂದಿಗೆ ಊಟಕ್ಕೆಂದು ಹರಿಗೆಯ ತೋಪಿನಘಟ್ಟದ ತಿರುವಿನ ಬಳಿ ಹೋದಾಗ ದರ್ಶನ್ ಅಂಡ್ ಗ್ಯಾಂಗ್ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿತ್ತು.

ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಪ್ರಶಾಂತ್ ನ ನೆತ್ತಿಗೆ ಬೀಸಿದ ಲಾಂಗು ಆತನ ನೆತ್ತಿಯ ಒಳಗೆ ಹೊಕ್ಕಿಕೊಂಡಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತು ಇತರೆಡೆ ಚಿಕಿತ್ಸೆಗೆ ಪ್ರಯತ್ನ ಪಟ್ಟರೂ ನಿರಾಸೆ ಮೂಡಿತ್ತು. ಖಾಸಗಿ ಆಸ್ಪತ್ರೆಯಲ್ಲಿ ನಡೆಸಿದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಜವರಾಯನ ಬಳಿ ಹೋಗಿ ಬಂದ ಪ್ರಶಾಂತ್ ರನ್ನ ಕಂಡ ಕುಟುಂಬ‌ ಸಧ್ಯಕ್ಕೆ ನಿಟ್ಟುಸಿರು ಬಿಟ್ಟಿದೆ. ಮೊನ್ನೆ ಯಶಸ್ವಿ ಚಿಕಿತ್ಸೆ ನಡೆಸಲಾಗಿದೆ.

ಇದನ್ನೂ ಓದಿ-https://suddilive.in/archives/11235

Related Articles

Leave a Reply

Your email address will not be published. Required fields are marked *

Back to top button