ಕ್ರೈಂ ನ್ಯೂಸ್

ಭ್ರಷ್ಠಾಚಾರದ ಆರೋಪವಿರುವ ಗೋಪಿನಾಥ್ ರನ್ನ ವಜಾಗೊಳಿಸಿ-ಶಿವಣ್ಣ

ಸುದ್ದಿಲೈವ್/ಶಿವಮೊಗ್ಗ

ಸಮಾಜ ಕಲ್ಯಾಣ ಇಲಾಖೆಯ ಗೋಪಿನಾಥ್ ಅವರನ್ನ ಸರ್ಕಾರ ಅಮಾನತ್ತು ಮಾಡಿತ್ತು. ಅಮಾನತ್ತಿನ ಬದಲಾಗಿ ವಜಾಗೊಳಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಶಿವಪ್ಪ ಆಗ್ರಹಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗೋಪಿನಾಥ್ ಮತ್ತು ಉಷಾರವರು ಬಿಜೆಪಿ ಸರ್ಕಾರವಿದ್ದಾಗ ಬಾಲಕಿಯರ ಮೆಟ್ರಿಕ್ ನಂತರದ ಹಾಸ್ಟೆಲ್ ನಲ್ಲಿ ಟೀಪಾಯಿ, ಜಾಮೂನು ಬಟ್ಟಲು, ಲೈಬ್ರರಿ ಬೀರು ಮೊದಲಾದ ಖರೀದಿ ವಸ್ತುಗಳಲ್ಲಿ ಅವ್ಯವಹಾರ ನಡೆದಿತ್ತು ಎಂಬ ಆರೋಪ ಮಾಡಲಾಗಿತ್ತು. ಲೋಕಾಯುಕ್ತ ಬಲೆಗೂ ಗೋಪಿನಾಥ್ ಬಿದ್ದಿದ್ದರು.

ಲೋಕಾಯುಕ್ತ ಬಲೆಗೆ ಬಿದ್ದ ಬೆನ್ಬಲ್ಲೇ ಅಮಾತ್ತುಗೊಂಡು ಮತ್ತೆ ಅದೇ ಇಲಾಖೆಗೆ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಹಾಜರಾದ ಗೋಪಿನಾಥ್ ವಿರುದ್ಧ ಸುದ್ದಿಗೋಷ್ಠಿ ನಡೆಸಿದ ಶಿವಣ್ಣ ಬಿಜೆಪಿ ಸರ್ಕಾರದಲ್ಲಿ ಗೋಪಿನಾಥ್  80 ಲಕ್ಷ ರೂ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದ್ದರು.  ಅವರ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿದ್ದರು.

ಸುದ್ದಿಗೋಷ್ಠಿಯ ಬೆನ್ನಲ್ಲೇ ಸರ್ಕಾರ ಗೋಪಿನಾಥ್ ರನ್ನ ಅಮಾನತ್ತುಗೊಳಿಸಿ ತನಿಖೆಗೆ ಆದೇಶಿಸಿದೆ. ಇಂದು ಸುದ್ದಿಗೋಷ್ಠಿ ನಡೆಸಿದ ಶಿವಣ್ಣ ತನಿಖೆಯನ್ನ ಸ್ವಾಗತಿಸಿದ್ದಾರೆ. ಆದರೆ ಸರ್ಕಾರ ಗೋಪಿನಾಥ್ ಅವರ ಭ್ರಷ್ಠಾಚಾರದ ಹಿನ್ನಲೆಯಲ್ಲಿ ಕೆಲಸದಿಂದ ವಜಾ ಗೊಳಿಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ-https://suddilive.in/archives/9163

Related Articles

Leave a Reply

Your email address will not be published. Required fields are marked *

Back to top button