ನಾನು ಈಶ್ವರಪ್ಪನವರ ಅಭಿಮಾನಿ-ಗೂಳಿಹಟ್ಟಿ ಶೇಖರ್
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ಈಶ್ವರಪ್ಪನವರ ಗೆಲುವಿಗೆ ಟೊಂಕಕಟ್ಟಿರುವ ಮಾಜಿ ಸಚಿವ ಗೂಳಿಹಟ್ಟಿಶೇಖರ್ ಇಂದು ಈಶ್ವರಪ್ಪನವರ ಮಬೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆಯನ್ನ ಉದ್ದೇಶಿಸಿ ಮಾತನಾಡಿರುವ ಮಾಜಿ ಸಚಿವರು, ಈಶ್ವರಪ್ಪ ಎಲ್ಲರಿಗೂ ಬೇಕಾದ ರಾಜಕಾರಣಿ. ಇಂದಿನ ಯುವಜನತೆಗೆ ಸರಿಯಾದ ರಾಜಕಾರಣಿ ಈಶ್ವರಪ್ಪರಾಗಿದ್ದಾರೆ. ಈಶ್ವರಪ್ಪ ಅವರನ್ನು ಒಪ್ಪುವಂತಹ ಅಭಿಮಾನಿ ಬಳಗವೇ ಇದೆ ಎಂದು ಗುಡುಗಿದ್ದಾರೆ.
ಈಶ್ವರಪ್ಪ ಅವರ ಅಭಿಮಾನಿಗಳಲ್ಲಿ ನಾನು ಒಬ್ಬನಾಗಿದ್ದೇನೆ. ಈಶ್ವರಪ್ಪ ಎಲ್ಲಾ ಸಮಾಜಕ್ಕು ಬೇಕಾದ ವ್ಯಕ್ತಿಯಾಗಿದ್ದಾರೆ. ಹಿಂದುತ್ವ, ಧರ್ಮದ ಹೆಸರಿನಲ್ಲಿ ಈಶ್ವರಪ್ಪ ನಮಗೆ ಪ್ರೇರಣೆ ಸಹ ಆಗಿದ್ದಾರೆ. ಈಶ್ವರಪ್ಪ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದಾರೆ. ಅವರನ್ನು ದೆಹಲಿಗೆ ಗೆಲ್ಲಿಸಿಯೇ ಕಳುಹಿಸಬೇಕೆಂದು ಕರೆ ನೀಡಿದರು.
ನಾನು ಚುನಾವಣೆ ಮುಗಿಯುವವರೆಗೆ ಇಲ್ಲಿಯೇ ಇರುತ್ತೇನೆ. ಪ್ರತಿ ಕ್ಷೇತ್ರಕ್ಕೂ ತೆರಳಿ ಮತಯಾಚನೆ ನಡೆಸುತ್ತೇನೆ ಎಂದು ಗೂಳಿಹಟ್ಟಿ ಶೇಖರ್ ಪುನರುಚ್ಚರಿಸಿದ್ದಾರೆ.
ಇದನ್ನೂ ಓದಿ-https://suddilive.in/archives/11202