ಸ್ಥಳೀಯ ಸುದ್ದಿಗಳು

ನಗರ, ಗ್ರಾಮಾಂತ ಹಾಗೂ ಶಿಕಾರಿಪುರದಲ್ಲಿ ಅತಿಹೆಚ್ಚು ಲೀಡ್-ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಬಂಡಾಯ ನಾಯಕ ಈಶ್ವರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಯೇ ಮಾಡ್ತೇನೆ. ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರದಲ್ಲಿ ಹೆಚ್ಚು ಲೀಡ್ ಪಡೆಯುತ್ತೇನೆ ಎಂದರು.

ಇತರೆ ಕಡೆಗಳಲ್ಲಿ ಲೀಡ್ ಪಡೆಯಲು ಶ್ರಮಿಸುತ್ತೇನೆ. ಪಕ್ಷ ಶುದ್ದೀಕರಣ ಮಾಡಬೇಕು ಎಂಬ ಸದಾನಂದಗೌಡ ಅವರ ಹೇಳಿಕೆಗೆ ನನ್ನ ಸಹಮತ ಇದೆ. ಪಕ್ಷವನ್ನು ಅಪ್ಪ ಮಕ್ಕಳ ಹಿಡಿತದಿಂದ ತಪ್ಪಿಸಬೇಕಿದೆ ಎಂದರು.

ಯಡಿಯೂರಪ್ಪ ಕೇಂದ್ರ ಸಂಸದೀಯ ಮಂಡಳಿ ಸದಸ್ಯರು, ಮಗ ವಿಜಯೇಂದ್ರ‌ ಶಾಸಕರು ಹಾಗು ರಾಜ್ಯಾಧ್ಯಕ್ಷರು. ರಾಘವೇಂದ್ರ ಅವರು ಸಂಸದರಾಗಿದ್ದಾರೆ. ರಾಜ್ಯದಲ್ಲಿ ಇವರ ಹಿಡಿತದಿಂದ ಪಕ್ಷವನ್ನು ತಪ್ಪಿಸಬೇಕಿದೆ. ಶಿಕಾರಿಪುರದಲ್ಲಿ ಅಪ್ಪ ಮಕ್ಕಳು ಹಣ ಖರ್ಚು ಮಾಡಿದ್ರೂ, ಜಾತಿ ಲಾಬಿ ಮಾಡಿದ್ರೂ 11 ಸಾವಿರ ಲೀಡ್ ಮಾತ್ರ ಸಿಕ್ತು ಎಂದು ಪುನರುಚ್ಚರಿಸಿದ್ದಾರೆ.

ಇದು ಈ ಚುನಾವಣೆಯಲ್ಲಿ ನಡೆಯಲ್ಲ ಅಂತಾ ಕಾರ್ಯಕರ್ತರು ಹೇಳ್ತಿದ್ದಾರೆ. ಲೋಕಸಭಾ ಚುನಾವಣೆ ನಂತರ ವಿಜಯೇಂದ್ರ‌ ಬದಲಾವಣೆ ಆಗ್ತಾರೆ. ನನ್ನ ನಿವಾಸದಲ್ಲೇ ಇದೇ 28 ರಂದು ಚುನಾವಣಾ ಕಾರ್ಯಾಲಯ ಉದ್ಘಾಟನೆ ಆಗ್ತದೆ. ಕೆಲವು ಪ್ರಮುಖರನ್ನು ಆಹ್ವಾನಿಸಿದ್ದೇನೆಪ್ರಮುಖರು ಬರುವ ನಿರೀಕ್ಷೆ ಇದೆ. ಪ್ರಮುಖರು ಬರದಿದ್ದರೆ ಮಹಿಳೆಯರಿಂದ ಉದ್ಘಾಟನೆ ಮಾಡಿಸುತ್ತೇನೆ ಎಂದರು.

ಇದನ್ನೂ ಓದಿ-https://suddilive.in/archives/11195

Related Articles

Leave a Reply

Your email address will not be published. Required fields are marked *

Back to top button