ಸ್ಥಳೀಯ ಸುದ್ದಿಗಳು

ಹಠಬಿಡದ ಈಶ್ವರಪ್ಪ-ಮುರಿದುಬಿತ್ತು ಕೇಂದ್ರ ನಾಯಕರ ಜೊತೆಗಿನ ಮಾತುಕತೆ?

ಸುದ್ದಿಲೈವ್/ಶಿವಮೊಗ್ಗ

ಈಶ್ವರಪ್ಪನವರ ಜೊತೆ ಸಂಧಾನ ಮಾತುಕೆಗೆ ಬಂದಿದ್ದ ಬಿಜೆಪಿಯ ಕೇಂದ್ರ ನಾಯಕರಿಗೆ ಹಿನ್ನಡೆಯಾಗಿದೆ. ಸಭೆಯ ನಡುವೆ ಎದ್ದು ಹೋಗಿದ್ದ ಈಶ್ವರಪ್ಪನವರ ಜೊತೆಗಿನ ರಾಷ್ಟ್ರೀಯ ಸಂಘನಾ ಕಾರ್ಯದರ್ಶಿ ರಾಧಾರಾಮ್ ದಾಸ್ ಅಗರ್ ವಾಲ್ ಅವರೊಂದಿನ ಮಾತುಕತೆ ಮುರಿದು ಬಿದ್ದಿದೆ.

12-00 ಕ್ಕೆ ರಾಧಾರಾಮ್ ಅಗರ್ ವಾಲ್ ಈಶ್ವರಪ್ಪನವರೊಂದಿಗೆ ಮಾತನಾಡಲು ಅವರ ಮನೆಗೆ ಬಂದಿದ್ದರು.  ಅರೊಂದಿಗೆ ಮಾತುಕತೆಗೆ ಕುಳಿತಿದ್ದ ಈಶ್ವರಪ್ಪ ಸಭೆಯ ನಡುವೆ ಕಾರ್ಯಕ್ರಮದ ಹಿನ್ನಲೆಯಲ್ಲಿವೆದ್ದು ಹೋಗಿದ್ದರು. ಈಶ್ವರಪ್ಪನವರು ತೆರಳಿ  ಸುಮಾರು 1 ಗಂಟೆಯ ವರೆಗೆ ಈಶ್ವರಪ್ಪನವರಿಗೆ ಕಾಯ್ದ ಅಗರ್ ವಾಲ್ ತಂಡ ಈಶ್ವರಪ್ಪನವರ ಮನೆಯಿಂದ ಹೊರಬಂದಿದ್ದಾರೆ. ಇದರಿಂದ ಈಶ್ವರಪ್ಪನವರ ಜೊತೆಗಿನ ಸಂಧಾನ ಮಾತುಕತೆ ಮುರಿದುಬಿದ್ದಿದೆ.

ಈ ಬಗ್ಗೆ ಮಾತನಾಡಿದ ಸಂಘನಾ ಕಾರ್ಯದರ್ಶಿ ಒಂದು ತಿಂಗಳಿಂದ ಕರ್ನಾಟಕಲ್ಲಿಯೇ ಇರುವೆ. ಸ್ನೇಹ ಮಾತುಕತೆಗಾಗಿ ಬಂದಿರುವೆ. ಈಶ್ವರಪ್ಪನವರ ಮನೆಯವರ ಜೊತೆ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾತನಾಡಿರುವೆ.  ಎಂದು ಮಾತ್ರ ತಿಳಿಸಿದ್ದಾರೆ. ವಿಫಲವಾಗಿರುವ ಬಗ್ಗೆ ಮಾಹಿತಿ ನೀಡಿಲ್ಲ. ಈಶ್ವರಪ್ಪನವರು ಸಭೆಯ ನಡುವೆ ಎದ್ದು ಹೋಗಿರುವುದು ಮತ್ತು  ಕಾದರೂ ಈಶ್ವರಪ್ಪ ಬಾರದ ಹಿನ್ನಲೆಯಲ್ಲಿ ಸಂಧಾನದ ಮಾತುಕತೆ ಉರಿದು ಬಿದ್ದಿದೆ ಎಙದೇ ಬಣ್ಣಿಸಲಾಗುತ್ತಿದೆ.

ಇದರಿಂದ ಈಶ್ವರಪ್ಪನವರೊಂದಿಗೆ ಕೇಂದ್ರ ಬಿಜೆಪಿ ನಾಯಕರ ಜೊತೆಗಿನ ಸಂಧಾನ ಮುರಿದುಬಿದ್ದಿದೆ. ಜಿಲ್ಲಾ ಬಿಜೆಪಿ ಸಂಘನಾ ಕಾರ್ಯದರ್ಶಿ ನಟರಾಜ್, ಎಂಎಲ್ ಸಿ ಅರುಣ್ ರಾಧಾರಾಮ್ ಅಗರ್ವಾಲ್ ರಿಗೆ ಸಾಥ್ ನೀಡಿದ್ದರು. ಸಂಧಾನ ಮಾತುಕತೆ ಮುರಿದು ಬಿದ್ದ ಹಿನ್ನಲೆಯಲ್ಲಿ ಈಶ್ವರಪ್ಪನವರ ಸ್ಪರ್ಧೆ ದಿನೆ ದಿನೆ ಗಟ್ಟಿಯಾಗುತ್ತಿದೆ. ಇದರಿಂದ ಬಿಎಸ್ ವೈ ಕುಟುಂಬಕ್ಕೆ ತಲೆನೋವಾಗಿ ಪರಿಣಮಿಸುತ್ತಿದೆ.

ಇದನ್ನೂ ಓದಿ-https://suddilive.in/archives/10894

Related Articles

Leave a Reply

Your email address will not be published. Required fields are marked *

Back to top button