ಸ್ಥಳೀಯ ಸುದ್ದಿಗಳು

ವೈದ್ಯನನ್ನ ಮತ್ತು ಅತ್ತೆಯನ್ನ ಬಂಧಿಸುವಂತೆ ಸೊಸೆ ಸುದ್ದಿಗೋಷ್ಠಿ

ಸುದ್ದಿಲೈವ್/ಶಿವಮೊಗ್ಗ

ವೈದ್ಯರ ಕುಂಬದಲ್ಲಿ ಕಲಹ ಉಟಾಗಿದೆ. ಮದುವೆಯಾಗಿ ಐದು ತಿಂಗಳು ಕಳೆಯುವುದರೊಳಗೆ ಒಡಕು ಮೂಡಿದೆ. ಕುಟುಂಬದ ಕಲಹ ಬೀದಿಗೆ ಬಂದಿದೆ.

ಕುಟುಂಬದಲ್ಲಿ ಮೂಡಿರುವ ಒಡಕುಇನಿಂದಾಗಿ ದೂರು ಪ್ರತಿದೂರುಗಳಾಗಿವೆ. 28/08/2023 ರಂದು ಭದ್ರಾವತಿ ತಾಲೂಕು ಅರಳಹಳ್ಳಿ ಗ್ರಾನದ ಜನನಿ ಯಾನೆ ಜ್ಞಾನೇಶ್ವರಿ ಎಂಬುವರು ಭದ್ರಾವತಿ ಮಾಧವ ನಗರದ ನಿವಾಸಿ ಡಾ.ಕೆ.ಪವನ್ ಎಂಬುವರೊಂದಿಗೆ ಮದುವೆಯಾಗಿದೆ.

ಮದುವೆಯಾದ ಬಳಿಕ ಅತ್ತೆ ಮಾವ ಒಂದಲ್ಲಾ‌ಒಂದು ರೀತಿಯಲ್ಲಿ ತೊಂದರೆ ಕೊಡುತ್ತಿದ್ದಾರೆ. ಗಂಡನಿಗೆ ಅನೈತಿಕ ಸಂಬಂಧವಿರುವುದು ಮೂರನೇ ವ್ಯ್ತಿಯಿಂದ ತಿಳಿದಿಲು ಬಂದಿದೆ. ಯಾವಾಗ ಅನೈತಿಕ ಸಂಬಂಧದ ಬಗ್ಗೆ ತಿಳಿಯುತ್ತದೆಯೋ ಅದನ್ನ ಪ್ರಸ್ತಾಪಿಸಿದಾಗ ಅತ್ತೆ ಅಡುಗೆ ಙೆಯಿಂದಲೇ ಚಾಕು ತಂದು ಕೊಲೆಗೆ ಯತ್ನಿಸಿದ್ದಾರೆಂದು ಜನನಿ ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅದರಂತೆ ಕೆ.ಪವನ್ ತಾಯಿ ಶಾಂತ ಎಂಬುವರು ಸೊಸೆ ಮಗನ ಬಳಿ ಹಣ ಒಳ್ಳೆಯ ಕೆಲಸಕ್ಕೆಂದು ಹಣ ಪಡೆದು ಹೇಳದೆ ಕೇಳದೆ ಟ್ರಿಪ್ ಗೆ ಹೋಗುತ್ತಿದ್ದಳು. ರೀಲ್ಸ್ ಹುಚ್ಚು ಜಾಸ್ತಿ ಇತ್ತು. ಹಗಲು ಮೂರು ಹೊತ್ತು ಯವರು ಮಬೆಗೆ ಹೋಗುತ್ತಿದ್ದಳು. ಈ ಸಂಬಂಧ ಹಿರಿಯರ ಸಮ್ಮುಖದಲ್ಲಿ ಪಮಚಾಯಿತಿಯೂ ನಡೆದಿತ್ತು.

ಆದರೆ ಸುಧಾರಣೆಯಾಗದ ಸೊಸೆ ಜನನಿ ಈ ಸಙಬಂಧ ಜಗಳವಾಡಿ ಹಲ್ಲೆ ಮಾಡಿದ್ದಾಳೆ ಎಂದು ದೂರು ದಾಖಲಿಸಿದ್ದಾರೆ. ಇಂದು‌ಮೀಡಿಯಾ ಹೌಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಸೊಸೆ ಜನನಿ, ಹಲ್ಲೆ ನಡೆಸಿದ ಮತ್ತು ಕಿರುಕುಳ ನೀಡುತ್ತಿರುವ ಅತ್ತೆ ಶಾಂತ ಗಂಡ ಡಾ.ಪವನ್ ರನ್ನ ಬಂಧಿಸಬೇಕು.

ಮತ್ತು ದೂರು‌ನೀಡಿ ಐದು ದಿನ‌ಕಳೆದರೂ ಅಲ್ಲಿ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳು ಯಾವುದೇ ಕ್ರಮ ಜರುಗಿಸಿಲ್ಲ. ಭ್ರಷ್ಠಾಚಾರದ ಹಿನ್ನಲೆಯಲ್ಲಿ ಬಂಧಿಸಿಲ್ಲವೆಂದು ಆರೋಪಿಸಿದ್ದಾರೆ. ಡಾ.ಪವನ್ ಶಿರಾಳಕೊಪ್ಪದ ಎಳೆಗೇರಿಯ ಪಿಸಿಹೆಚ್ ನಲ್ಲಿ ಸರ್ಕಾರಿ ವೈದ್ಯರಾಗಿದ್ದಾರೆ.

ಇದನ್ನೂ ಓದಿ-https://suddilive.in/archives/10835

Related Articles

Leave a Reply

Your email address will not be published. Required fields are marked *

Back to top button