ಸ್ಥಳೀಯ ಸುದ್ದಿಗಳು

ಮಾ.20 ರಿಂದ ಗೀತಾ ಶಿವರಾಜ್ ಕುಮಾರ್ ಪ್ರಚಾರಕ್ಕೆ-ಮಧು ಬಂಗಾರಪ್ಪ

ಸುದ್ದಿಲೈವ್/ಶಿವಮೊಗ್ಗ

ಕಾಂಗ್ರೆಸ್ ಅಭ್ಯರ್ಥಿ ಎಲ್ಲಿ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹುಡುಕಾಟದಲ್ಲಿರುವ ಮತದಾರರಿಗೆ ಭರವಸೆ ದೊರೆತಿದೆ. ಮಾ.20 ರಿಂದ ಗೀತಾ ಶಿವರಾಜ್ ಕುಮಾರ್ ಚುನಾವಣ ಪ್ರಚಾರಕ್ಕೆ ಕಣಕ್ಕಿಳಿಯಲಿದ್ದಾರೆ‌ಮತ್ತು ನಟ ಶಿವರಾಜ್ ಕುಮಾರ್ ಸಹ ಶಿವಮೊಗ್ಗದ ಪ್ರಚಾರಕ್ಕೆ ಬರುತ್ತಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣ ಪ್ರಚಾರದಲ್ಲಿ ತಾಲುಕು ಮಟ್ಟದಲ್ಲಿಯೂ ಕಾರ್ಯ್ರಮಗಳನ್ನ ಇಟ್ಟುಕೊಳ್ಳುತ್ತೇವೆ. ಎಂಪಿ ಆಗಲು ಗೀತಾರಿಗೆ ಅರ್ಹತೆ ಇದೆ ಎಂದರು.

ಬೋರ್ಡ್ ಎಕ್ಸಾಂ ಯಾಕೆ ಬೇಕು ಎಂಬ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು. ಬೋರ್ಡ್ ಎಕ್ಸಾಂ ಮೊದಲು ಇತ್ತು ಮಧ್ಯದಲ್ಲಿ ನಿಂತಿತ್ತು. ಈಗ ಮತ್ತೆ ಆರಂಭಿಸಲಾಗಿದೆ. ಬೋರ್ಡ್ ಎಕ್ಸಾಂ ಮಾಡುವ ಉದ್ದೇಶ ಏನು ಅಂದರೆ ಎಕ್ಸಾಂ ನಿಂದ ಪರೀಕ್ಷೆಯ ಭಯ ನಿವಾರಿಸಲು ಬೋರ್ಡ್ ಎಕ್ಸಾಂ ನಡೆಸಲಾಗುತ್ತಿದೆ ಎಂದರು.

ಸುಂದ್ರೇಶ್ ಮಾತನಾಡಿ, ಕಾಂಗ್ರೆಸ್ ನಾಯಕರ ಐಕ್ಯತೆ ಬಗ್ಗೆ ಅನುಮಾನ ಇತ್ತು‌ ಅನುಮಾನ ಬೇಡ ನಾವೆಲ್ಲರೂ ಒಂದಾಗಿದ್ದೇವೆ. . ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ನಡೆಸಲಾಗುವುದು ದಿನಾಂಕ ನಿಗದಿಪಡಿಸಲಿದ್ದೇವೆ. ಗ್ರಾಪಂ ಮತ್ತು ಹೋಬಳಿ ಮಟ್ಟದಲ್ಲಿ ಪ್ರಚಾರ ಮಾಡಲಾಗುವುದು ಎಂದರು.

ಬಿಜೆಪಿ ಸುಳ್ಳು ಭರವಸೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದು. ಕೇಂದ್ರ ಸರ್ಕಾರ ಮೂಲಬೂತ ಸೌಕರ್ಯೊದಗಿಸಲು ವಿಫಲರಾಗಿದ್ದಾರೆ. ರಾಘವೇಂದ್ರ ಎಂಪಿ ಆದರೂ ಸ್ಮಾರ್ಟ್ ಸಿಟಿ ವೀಕ್ಷಣೆಗೆ ಬಂದಿಲ್ಲ ಎಂದು ದೂರಿದರು.‌

ಇದನ್ನೂ ಓದಿ-https://suddilive.in/archives/10749

Related Articles

Leave a Reply

Your email address will not be published. Required fields are marked *

Back to top button