ಸ್ಥಳೀಯ ಸುದ್ದಿಗಳು

ನೇಹಾ ಹತ್ಯೆ ಖಂಡಿಸಿ ರಾಷ್ಟ್ರಭಕ್ತ ಬಳಗದಿಂದ ಬೃಹತ್ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯ ಖಂಡಿಸಿ ಇಂದು ರಾಷ್ಟ್ರಭಕ್ತ ಬಳಗದಿಂದ ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಈಶ್ವರಪ್ಪನವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ಜೈಲ್ ವೃತ್ತದಿಂದ ಹೊರಟ ಪ್ರತಿಭಟನ ಮೆರವಣಿಗೆ ಮಹಾವೀರ ವೃತ್ತ ತಲುಪಿತು.

ಈ ವೇಳೆ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತಾಡಿದ ಈಶ್ವರಪ್ಪ,ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ, ಗೃಹ ಮಂತ್ರಿ ಪ್ರಮೇಶ್ವರ್, ಸಿಎಂ ಸಿದ್ದರಾಮಯ್ಯ ಅವರಿಗೆ ನಿಮ್ನ ಮಕ್ಜಳಿಗೆ ಕೊಲೆಯಾಗಿದ್ದರೆ ನೀವು ಏನು ಮಾಡ್ತೀದ್ರಿ. ಆಕಸ್ಮಿಕ ಎಂದು ಹೇಳುತ್ತಿದ್ದರಾ ಎಂದು ಕೇಳಿದ ಈಶ್ವರಪ್ಪ ಪ್ರಶ್ನಿಸಿದರು.

ಲವ್ ಜಿಹಾದ್ ಆಕಸ್ಮಿಕ ಎಂದು ಹೇಳಿದ್ರೆ ನಿಮ್ಮ ಹೆಂಡ್ತಿ ಸುಮ್ಮನೆ ಇರ್ತಿದ್ದಾ? ನೀನು ಮನುಷ್ಯನಾ ಎಂದು ಪ್ರಶ್ನಿಸುತ್ತಿದ್ದರು. ಹಿಂದೂ ಸಮಾಜದ ಯುವಕ ಯುವತಿಯರ ಕೊಲೆ ರಾಕ್ಷಸೀಯ ಕೃತ್ಯವಾಗಿದೆ. ನೇಹಾಳನ್ನ ಕೊಂದು ರಾಕ್ಷಸೀಯ ಕೃತ್ಯೆಸೆಗಿದ ಮುಸ್ಲೀಂ ಗೂಂಡಾಗಳಿಗೆ ಕಠಿಣ ಶಿಕ್ಷೆ ಆಗಬೇಕು.

ಅವನು ಬದುಕಿರುವುದೇ ಹೆಚ್ಚು. ಸಮಾಜದ ಕೈಗೆ ಸಿಕ್ಕರೆ ತುಂಡು ತುಂಡಾಗುತ್ತಿದ್ದ. ನೇಹಳ ಕೊಲೆ ಆಕಸ್ಮಿಕನೋ ಅಥವಾ ಲವ್ ಜಿಹಾದ್ ಎಂದು ತೀರ್ಮಾನಿಸುವುದು ಸರ್ಕಾರವಲ್ಲ. ಇದನ್ನ ಸಿಬಿಐಗೆ ವಹಿಸಬೇಕು.‌ ಸಿಬಿಐ ತನಿಖೆ ಮೂಲಕ ಸತ್ಯ ಹೊರಗೆ ಬರಲಿದೆ ಎಂದು ಈಶ್ವರಪ್ಪ ಗುಡುಗಿದರು.

ಈ ಘಟನೆ ಮತ್ತೊಮ್ಮೆ ಸಂಭವಿಸದಂತೆ ಕಾಂಗ್ರೆಸ್ ಸರ್ಕಾರ ಕ್ರಮ‌ಕೈಗೊಳ್ಳಬೇಕೆಂದು ಆಗ್ರಹಿಸಿದರು.‌ ಪ್ರತಿಭಟನೆಯಲ್ಲಿ, ಪುತ್ರ ಕಾಂತೇಶ್, ಪಾಲಿಕೆ ಸದಸ್ಯರಾದ ವಿಶ್ವಾಸ್, ಶಂಜರ್ ಗನ್ನಿ, ದಿಲೀಪ್ ಕುಮಾರ್ ಸುವರ್ಣ ಶಂಕರ್ ಮೊದಲಾದ ರಾಷ್ಟ್ರಭಕ್ತ ಬಳಗದವರು ಉಪಸ್ಥಿತರಿದ್ದರು

ಇದನ್ನೂ ಓದಿ-https://suddilive.in/archives/13378

Related Articles

Leave a Reply

Your email address will not be published. Required fields are marked *

Back to top button