ಶಿವಮೊಗ್ಗ ಗ್ರಾಮಾಂತರ ಲೋಕಸಭಾ ಚುನಾವಣೆಯ ಕಾರ್ಯಾಲಯ ಉದ್ಘಾಟನೆ-ಬಿವೈ ಆರ್ ಹೇಳಿದ್ದೇನು?
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಯಾಗಿ ಬಿ.ವೈರಾಘವೇಂದ್ರ ಘೋಷಣೆಯಾಗುತ್ತಿದ್ದಂತೆ ಶಿವಮೊಗ್ಗದ ದುರ್ಗಿಗುಡಿಯಲ್ಲಿ ಶಿವಮೊಗ್ಗ ಗ್ರಾಮಾಂತರ ಚುನಾವಣ ಕಾರ್ಯಾಲವನ್ನ ಉದ್ಘಾಟಿಸಿದ್ದಾರೆ.
ಕಾರ್ಯಲಯ ಆರಂಭಕ್ಕೂ ಸಂಸದರು ತಿಲಕ್ ನಗರದಲ್ಲಿರುವ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ್ದಾರೆ. ಕಚೇರಿಯನ್ನ ಮಂತ್ರ ಘೋಷಗಳೊಂದಿಗೆ ಉದ್ಘಾಟಿಸಿದ್ದಾರೆ.
ನಂತರ ಮಾಧ್ಯಮಗಳಿಗೆ ಮಾತನಾಡಿ, ಕಾರ್ಯಾಲಯದ ಮೂಲಕ ಕಾರ್ಯಕರ್ತರು ಕೆಲಸ ಮಾಡಲಿದಾರೆ. ಚುನಾವಣೆಯಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎಂಬ ಕಾರಣಕ್ಕೆ ಕಾರ್ಯಾಲಯ ಆರಂಭಿಸಲಾಗಿದೆ ಎಂದರು.
ಉದ್ಯೋಗ ಸೃಷ್ಠಿ, ಅಭಿವೃದ್ಧಿಯ ಕೆಲಸಗಳಿಗೆ ಒತ್ತು ನೀಡುವುದು ಈ ಬಾರಿಯ ಚುನಾವಣಿಯ ಮುಖ್ಯ ಉದ್ದೇಶವಾಗಿದೆ. ದಕ್ಷಿಣ ಕನ್ನಡ ಮತ್ತು ಮಲೆನಾಡಿನ ನಡುವಿನ ಹೆಬ್ಬಾಗಿಲಾಗಿರುವ ಆಗುಂಬೆಯಲ್ಲಿ ಟನಲ್ ನಿರ್ಮಿಸಲು ಡಿಪಿಆರ್ ರಚಿಸಲಾಗುತ್ತಿದೆ. ಇವತ್ತಲ್ಲ ನಾಳೆ ಅದನ್ನ ಪೂರ್ಣಗೊಳಿಸುತ್ತೇವೆ ಎಂದರು.
ಯಾವ ಕಾರ್ಯಕರ್ತನಿಗೂ ಮೋಸ ಆಗೊಲ್ಲ
ಯಡಿಯೂರಪ್ಪನವರ ವಿರುದ್ಧ ಈಶ್ವರಪ್ಪನವರು ಅಸಮಾಧಾನ ಹೊರಹಾಕಿರುವ ಬಗ್ಗೆ ಪ್ರತಿಕ್ರಿಯಿಸಿದ ರಾಘವೇಂದ್ರ ಬಿಎಸ್ ವೈ ವಿರುದ್ಧ ಅಸಮಾಧಾನ ಹೊರಹಾಕಿರುವುದು ಸರಿಯಲ್ಲ. ಯಾವ ಕಾರ್ಯಕರ್ತರಿಗೆ ಮೋಸ ಆಗೊಲ್ಲ. ಸಮಯಕ್ಕಾಗಿ ಕಾಯಬೇಕು. ಈ ಹಿಂದೆ ಬಿಎಸ್ ವೈಗೆ ರಾಷ್ಟ್ರಮಟ್ಟದ ರಾಜಕಾರಣಕ್ಕೆ ಬಿಜೆಪಿ ಕರೆದಾಗಲೇ ತ್ಯಾಗ ಮಾಡಿದ್ದ ಬಿಎಸ್ ವೈ ತಮ್ಮ ಪಕ್ಷದ ಕಾರ್ಯಕರ್ತರಿಗೆ ಮೋಸ ಮಾಡುವ ಉದ್ದೇಶವಿಲ್ಲ ಎಂದರು
ಇದನ್ನೂ ಓದಿ-https://suddilive.in/archives/10695