ರಾಜ್ಯಾಧ್ಯಕ್ಷ ಷಡಾಕ್ಷರಿ ಕೆಸದಿಂದ ಬಿಡುಗಡೆಗೊಳಿಸಿ ಆದೇಶ
ಸುದ್ದಿಲೈವ್/ ಶಿವಮೊಗ್ಗ
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರೂ,ಲೆಕ್ಕಾಧಿಕಾರಿಯೂ ಆಗಿರುವ ಸಿ.ಎಸ್. ಷಡಾಕ್ಷರಿ ಅವರನ್ನು ಕಛೇರಿ ಕರ್ತವ್ಯದಿಂದ ಬಿಡುಗಡೆಗೊಳಿಸಿ ಜಂಟಿ ನಿರ್ದೇಶಕರು ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ಶಿವಮೊಗ್ಗ ಇವರು ಆದೇಶಿದ್ದಾರೆ.
ಜಂಟಿ ನಿರ್ದೇಶಕರು ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ಶಿವಮೊಗ್ಗ ಕಛೇರಿಯಲ್ಲಿ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿ.ಎಸ್ ಷಡಕ್ಷಾರಿ ಅವರನ್ನು ನ.09 ರಂದು ಅಪರಾಹ್ನ ಕಛೇರಿ ಕರ್ತವ್ಯದಿಂದ ಬಿಡುಗಡೆಗೊಳಿಸಿ,ಉಪನಿರ್ದೇಶಕರ ಕಛೇರಿ,ಸಮಾಜ ಕಲ್ಯಾಣ ಇಲಾಖೆ ಕೋಲಾರ ಇಲ್ಲಿಗೆ ವರದಿ ಮಾಡಿಕೊಳ್ಳಲು ಸೂಚಿಸಿದ್ದಾರೆ.
ಹಲವು ರಾಜಕಾರಣ ಬೆರೆತ ಹಿನ್ನಲೆಯಲ್ಲಿ ಷಡಾಕ್ಷರಿಯವರ ವರ್ಗಾವಣೆಯೂ ರದ್ದಾಗಿದೆ ಎಂಬ ಮಾತು ಕೇಳಿ ಬಂದಿತ್ತು. ಇಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸುದ್ದಿಗೋಷ್ಠಿ ನಡೆಸಿ ರಾಜಕೀಯ ಬೆರಸದೆ ಸರ್ಕಾರ ನಿಯೂಕ್ತಿಗೊಳಿಸಿದ ಜಾಗಕ್ಕೆ ವರ್ಗಾವಣೆ ಆಗಬೇಕು. ಇಲ್ಲಿ ರಾಜ್ಯಾಧ್ಯಕ್ಷರ ವರ್ಗಾವಣೆಯಾಗಿಲ್ಲ. ಬಿ ಗ್ರೂಪ್ ಅಧಿಕಾರಿಯನ್ನ ಎಂದು ಹೇಳಿತ್ತು.
ಇದನ್ನೂ ಓದಿ-https://suddilive.in/archives/2923