ರಾಜಕೀಯ ಸುದ್ದಿಗಳು

ಮಾಜಿ ಡಿಸಿಎಂ ಈಶ್ವರಪ್ಪ ಶಾಸಕ ಯತ್ನಾಳ್ ಗೆ ಧನ್ಯವಾದ ತಿಳಿಸಿದ್ದೇಕೆ?

ಸುದ್ದಿಲೈವ್/ಶಿವಮೊಗ್ಗ

ಪಕ್ಷದ ಶುದ್ಧೀಕರಣದ ಬಗ್ಗೆ ಮಾತನಾಡಿರುವ ಈಶ್ವರಪ್ಪನವರಿಗೆ ಕ್ಷೇತ್ರ ಬಿಟ್ಟುಕೊಟ್ಟು ದೊಡ್ಡವರಾಗಿ ಎಂದು ಹೇಳಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾಧ್ಯಮ ಹೇಳಿಕೆಗೆ ಮಾಜಿ ಡಿಸಿಎಂ ಈಶ್ವರಪ್ಪ ಟ್ವೀಟ್ ಮೂಲಕ ಧನ್ಯವಾದಗಳನ್ನ ತಿಳಿಸಿದ್ದಾರೆ.

ಮಾಧ್ಯಮಗಳಿಗೆ ಮಾತನಾಡಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕೇವಲ ಯಡಿಯೂರಪ್ಪ ಸೈಕಲ್ ತುಳಿದು ಬಿಜೆಪಿ ಪಕ್ಷ ಕಟ್ಟಲಿಲ್ಲ. ಈಶ್ವರಪ್ಪ, ಬಿ.ವಿ.ಶಿವಪ್ಪ, ಅನಂತ್ ಕುಮಾರ್ ಮೊದಲಾದ ನಾಯಕರ ಕೊಡುಗೆ ಸಹ ಇದೆ.

ನಮ್ಮ ಹಿರಿಯ ನಾಯಕರು ಈಸ್ವರಪ್ಪನವರು ಇದ್ದಾರೆ. ಅವರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನ ಈಶ್ವರಪ್ಪನವರಿಗೆ ತ್ಯಾಗದ ರೂಪದಲ್ಲಿ ಬಿಟ್ಟುಕೊಡಿ, ಬೇರೆಯವರಿಗೆ ಮಾತ್ರ ತ್ಯಾಗ‌ ಮಾಡುವ ಬೋಧನೆ ನಿಲ್ಲಿಸಿ ಮೊದಲು ಈಶ್ವರಪ್ಪನವರಿಗೆ ಕ್ಷೇತ್ರ ಬಿಟ್ಟುಕೊಡುವ ಮೂಲಕ ಅಪ್ಪ ಮಗ ತ್ಯಾಗ ಮಾಡಲಿ ಎಂದು ಸಲಹೆ ನೀಡಿದ್ದಾರೆ.

ಅಂದರೆ ಸ್ಪರ್ಧೆಯಿಂದ ಹಿಂದೆ ಸರಿಯಬೇಡಿ ಎಂದು ಹೇಳುತ್ತಿದ್ದೀರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಈಶ್ವರಪ್ಪನವರು ಹಿರಿಯರಿದ್ದಾರೆ. ಅವರಿಗೆ ಗೌರವ ಕೊಡಿ, ಅವರು ಚುನಾವಣೆಗೆ ನಿಲ್ಲಬೇಡ ಎಂದಾಗ ಸ್ಪರ್ಧಿಸದೆ ಹಿಂದೆ ಸರಿದರು. ಈಗ ಅವರು ಏನು ಕೇಳ್ತಾರೆ ಕೊಡಬೇಕಾಗಿತ್ತು. ಹಿರಿಯರಿದ್ದಾರೆ. ಗೌರವ ಕೊಡಿ ಎಂದಿದ್ದಾರೆ.

ಇದನ್ನ ಟ್ವೀಟ್ ಮೂಲಕ ಧನ್ಯವಾದ ತಿಳಿಸಿರುವ ಮಾಜಿ ಡಿಸಿಎಂ ಈಶ್ವರಪ್ಪ ‘ನಿಮ್ಮ ಅಭಿಮಾನದ ಬೆಂಬಲಕ್ಕೆ ನಾನು ಚಿರಋಣಿ @BasanagoudaBJP Ji 🙏 ಬನ್ನಿ ಅಪ್ಪ-ಮಕ್ಕಳ ಆಡಳಿತವನ್ನು ಕೊನೆಗೊಳಿಸೋಣ ರಾಜ್ಯ @BJP4Karnataka ವನ್ನು ಶುದ್ಧೀಕರಿಸೋಣ. @narendramodi @AmitShah @JPNadda @CTRavi_BJP @mepratap @AnantkumarH @DVSadanandGowda’ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ-https://suddilive.in/archives/12757

Related Articles

Leave a Reply

Your email address will not be published. Required fields are marked *

Back to top button