ಗೀತಾ ಶಿವರಾಜ್ ಕುಮಾರ್ ಅನುಪಸ್ಥಿತಿಯಲ್ಲಿ ಸಂಭ್ರಮಾಚರಣೆ
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿನ್ನೆ ಅಭ್ಯರ್ಥಿಯನ್ನಾಗಿ ಗೀತಾ ಶೀವರಾಜ್ ಕುಮಾರ್ಎಂದು ಆಯ್ಕೆ ಮಾಡಿದ ಬೆನ್ನಲ್ಲೇ ಇಂದು ಕಾಂಗ್ರೆಸ್ ಕಾರ್ಯಕರ್ತರು ಶಿವಪ್ಪ ನಾಯಕ ಪ್ರತಿಮೆಯ ಬಳಿ ಪಟಾಕಿ ಸಿಡಿಸಿ ಸಹಿ ಹಂಚಿ ಸಂಭ್ರಮ ಆಚರಣೆ ಮಾಡಲಾಯಿತು
ಈ ಬಗ್ಗೆ ನಾತನಾಡಿದ ಕಾಂಗ್ರೆಸ್ ನಾಯಕ ಹೆಚ್ ಸಿ ಯೋಗೀಶ್ ಕಾಂಗ್ರೆಸ್ ಈಗಾಗಲೇ ಐದು ಗ್ಯಾರೆಂಟಿಯನ್ನ ನೀಡಿ ಜನರ ಜೀವನ ಮಟ್ಟವನ್ನ ಸುಧಾರಣೆಗೆ ಕಾರಣವಾಗಿದೆ. ಈಗ 6 ನೇ ಗ್ಯಾರೆಂಟಿಯಾಗಿ ಗೀತಾ ಶಿವರಾಜ್ ಕುಮಾರ್ ರವರನ್ನ ನೀಡಿದೆ ಅವರನ್ನ ಗೆಲ್ಲಿಸಿಕೊಳ್ಳುವ ಜವಬ್ದಾರಿ ನಮ್ಮದು ಎಂದರು
ಚುನಾವಣೆ ಘೋಷಣೆ ಆಗಿ ಒಂದು ದಿನ ಕಳೆದಿದೆ. ಆದರೆ ಸಂಭ್ರಮಾಚರಣೆಗೆ ಅಭ್ಯರ್ಥಿಯ ಅನುಪಸ್ಥಿತಿ ಎದ್ದುಕಾಣುತ್ತಿದೆ. ಮಂಗಳವಾರ ಅಭ್ಯರ್ಥಿಯ ಆಗಮನದ ನಿರೀಕ್ಷೆ ಇದೆ. ಮಂಗಳವಾರದ ನಂತರ ಮಿಂಚಿನ ಸಂಚಲನ ಮೂಡಿಸುತ್ತಾರಾ ಎಂದು ಕಾದು ನೋಡಬೇಕಿದೆ.
ಸಂಭ್ರಮಾಚರಣೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ, ಕವಿತಾ ರಾಘವೇಂದ್ರ, ರಾಘವೇಂದ್ರ, ಸುವರ್ಣ ನಾಗರಾಜ್, ಕಾಶಿ ವಿಶ್ವನಾಥ್, ಅಲ್ತಾಬ್ ಪರ್ವೇಜ್, ಮಾಜಿ ಕಾರ್ಪರೇಟರ್ ಯಮುನಾರಂಗೇಗೌಡ, ರಂಗೇಗೌಡರು, ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/10349