ಸ್ಥಳೀಯ ಸುದ್ದಿಗಳು

ಚಿರತೆ ಬೋನಿಗೆ

ಸುದ್ದಿಲೈವ್/ಭದ್ರಾವತಿ ಮಾ 03 :

ತಾಲೂಕು ಮಾವಿನಕೆರೆ, ಶಿವಪುರ ಗ್ರಾಮ ಹಾಗೂ ಅಡ್ಲಘಟ್ಟ ಮಾವಿನಕೆರೆ ಕಾಲೋನಿ, ಶಿವಪುರ ಹಾಗೂ ಅಡ್ಲಘಟ್ಟ ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿನ ನಾಯಿ ಮತ್ತು ಕರುಗಳನ್ನು ಭೇಟಿಯಾಡುತ್ತೀದ್ದ ಚಿರತೆ ಅರಣ್ಯ. ಇಲಾಖೆ ಇಟ್ಟಿದ್ದ ಬೋನಿಗೆ ಶುಕ್ರವಾರ ಬಿದ್ದಿದೆ.ಅರಣ್ಯ ಇಲಾಖೆಯು ಅಡ್ಲಘಟ್ಟ ಗ್ರಾಮದ ಹೊರ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಚಿರತೆ ಸೆರೆಗೆ ಬೋನು​ ಇಟ್ಟಿದ್ದರು.

ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಗ್ರಾಮಗಳ ಭಾಗದಲ್ಲಿ ಚಿರತೆಗಳ ಕಾಟ ಹೆಚ್ಚಿದೆ. ಕಳೆದ 6 ತಿಂಗಳುಗಳಿಂದ ಚಿರತೆಯು ಗ್ರಾಮದ ನಾಯಿಗಳನ್ನು ಬಲಿ ಪಡೆಯುತ್ತಿತ್ತು.ನಾಯಿಗಳ ನಂತರ
ಜಾನುವಾರು ಮತ್ತು ಕರುಗಳನ್ನು ತಿನ್ನಲು ಪ್ರಾರಂಭಿಸಿತ್ತು. ಕೊಟ್ಟಿಗೆಯಲ್ಲಿದ್ದ ಹಸುಗಳನ್ನು ಸಹ ಬೇಟೆಯಾಡಿತ್ತು. ಇದರಿಂದಾಗಿ ಗ್ರಾಮಸ್ಥರಲ್ಲಿ ಜೀವ ಭಯವನ್ನುಂಟು ಮಾಡಿತ್ತು.

ಇದನ್ನೂ ಓದಿ-https://suddilive.in/archives/9951

Related Articles

Leave a Reply

Your email address will not be published. Required fields are marked *

Back to top button