ರಾಷ್ಟ್ರೀಯ ಸುದ್ದಿಗಳು

ಖಾವಿಧಾರಣಿಯಿಂದ “ವೋಟ್ ಫಾರ್ ನೇಷನ್ ವೋಟ್ ಫಾರ್ ಮೋದಿ-2024” ಅಭಿಯಾನ

ಸುದ್ದಿಲೈವ್/ಶಿವಮೊಗ್ಗ

ಖಾವಿ ಸೀರೆ ತೊಟ್ಟ ಮಹಿಳೆ ಬುಲ್ಲೆಟ್ ಏರಿ ದೆಹಲಿಗೆ ಪ್ರಯಾಣ‌ಬೆಳೆಸಿದ್ದಾಳೆ. ನರೇಂದ್ರ ಮೋದಿ ಅವರನ್ನ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ಉದ್ದೇಶದಿಂದ‌ ಖಾವಿಧಾರಿಣಿ ದೇಶಪರ್ಯಟನೆಗೆ ಹೊರಟಿದ್ದಾರೆ.

“Vote For Nation – Vote For Modi 2024” ಎಂಬ‌ ಘೋಷ ವಾಖ್ಯದೊಂದಿಗೆ ತಮಿಳು ನಾಡಿನ ಖಾವಿಧಾರಣಿ ಶ್ರೀಮತಿ ರಾಜಲಕ್ಷ್ಮಿ ದೆಹಲಿ ಕಡೆ ಸಂಚರಿಸುತ್ತಿದ್ದಾರೆ. ದೆಹಲಿ ಕಡೆ ಹೊರಟಿರುವ ಮಹಿಳೆ ಈಗಾಗಲೇ ನಾಲ್ಕು ರಾಜ್ಯಗಳನ್ನ ಮುಗಿಸಿದ್ದಾರೆ. ಇಂದು ಶಿವಮೊಗ್ಗದ ಬಿಜೆಪಿ ಕಚೇರಿಗೆ ಆಗಮಿಸಿದ್ದಾರೆ.

ಲೀಗಲ್ ರೈಟ್ ಕೌನ್ಸಿಲ್ ಆಫ್ ಇಂಡಿಯಾ ಸದಸ್ಯೆಯಾದ ತಮಿಳುನಾಡಿನ ಮಧುರೈ ನಿವಾಸಿ ರಾಜಲಕ್ಷ್ಮೀ ದೇಶದಲ್ಲಿ ಮತ್ತೊಮ್ಮೆ ಶ್ರೀ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ತರಲು ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದೇಶದಾದ್ಯಂತ “Vote For Nation – Vote For Modi 2024” ಬೈಕ್ ಅಭಿಯಾನ ಕೈಗೊಂಡಿದ್ದು ಒಟ್ಟು 65 ದಿನಗಳಲ್ಲಿ 20 ರಾಜ್ಯಗಳಲ್ಲಿ ಸುಮಾರು 21,000 ಕಿ.ಮೀ ಸಂಚರಿಸಲು ತೀರ್ಮಾನಿಸಿದ್ದಾರೆ.

ಇಂದು ಶಿವಮೊಗ್ಗ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಪಕ್ಷದ ಕಚೇರಿಯಲ್ಲಿ ಅವರನ್ನ ಬರಮಾಡಿಕೊಂಡು ಅಭಿನಂದಿಸಿ, ಮುಂದಿನ ಪ್ರಯಾಣಕ್ಕೆ ಬೀಳ್ಕೊಡಲಾಯಿತು. ತಮಿಳುನಾಡಿನ ನಿವಾಸಿಯಾದರೂ ಕನ್ಬಡವನ್ನ ಹರಳು ಉರಿದಂತೆ ಮಾತನಾಡುತ್ತಾರೆ. ಕನ್ಬಡ ತಮಿಳು ಜೊತೆ 7 ಭಾಷೆಗಳು ಅವರಿಗೆ ಕರಗತವಾಗಿದೆ.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಮೇಘರಾಜ್ ಅವರು, ಶಾಸಕರಾದ ಶ್ರೀ ಆರಗ ಜ್ಞಾನೇಂದ್ರ ಅವರು, ರಾಜ್ಯ ಪ್ರಕೋಷ್ಟಗಳ ಸಂಯೋಜಕರಾದ ಶ್ರೀ ದತ್ತಾತ್ರೇಯ ಅವರು, ಮಾಜಿ ಶಾಸಕಿಯಾದ ಶ್ರೀಮತಿ ರೂಪಾಲಿ ನಾಯಕ್ ಅವರು ಹಾಗೂ ಜಿಲ್ಲೆಯ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/9865

Related Articles

Leave a Reply

Your email address will not be published. Required fields are marked *

Back to top button