ಕ್ರೈಂ ನ್ಯೂಸ್
ನೇದ್ರವಳ್ಳಿ ಕ್ರಾಸ್ ಬಳಿ ಅಪರಿಚಿತ ಶವ ಪತ್ತೆ
ಸುದ್ದಿಲೈವ್/ಸಾಗರ
ಸಾಗರ ತಾಲೂಕಿನ ಅನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯ ನೇದ್ರವಳ್ಳಿ ಕ್ರಾಸ್ ಬಳಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದ್ದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಗುರುವಾರ ಸಂಜೆ ವ್ಯಕ್ತಿಯೋರ್ವನ ಶವವೊಂದು ಪತ್ತೆಯಾಗಿದ್ದು, ಮೃತ ವ್ಯಕ್ತಿಯ ಕುತ್ತಿಗೆಯ ಸುತ್ತ ನೇಣು ಬಿಗಿದ ಗಾಯಗಳು ಕಾಣಿಸಿಕೊಂಡಿವೆ. ಇದರಿಂದ ಹಲವು ಅನುಮಾನಗಳು ಹುಟ್ಟುತ್ತಿದ್ದು, ಈ ಬಗ್ಗೆ ತನಿಖೆ ನಂತರ ಸತ್ಯ ಬೆಳಕಿಗೆ ಬರಲಿದೆ.
ವ್ಯಕ್ತಿಯ ಸಾವಾದ ನಂತರ ರಸ್ತೆ ಮೇಲೆ ಬಿಸಾಕಿ ಹೋಗಿರುವ ಸಾಧ್ಯತೆಗಳು ಹೆಚ್ಚಾಗಿವೆ. ಸ್ಥಳಕ್ಕೆ ಅನಂದಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ಇದನ್ನೂ ಓದಿ-https://suddilive.in/archives/9818