ಕ್ರೈಂ ನ್ಯೂಸ್

ಹುಂಚ ಬಳಿಯ ಮುತ್ತಿನಕೆರೆಯಲ್ಲಿ ಮಹಿಳೆಯನ್ನ‌ ಕೊಲೆ ಮಾಡಿದ ಪ್ರಕರಣ ಹಂತಕರು ಪತ್ತೆ

ಸುದ್ದಿಲೈವ್/ಶಿವಮೊಗ್ಗ

ಮಾ.18 ರಂದು ರಿಪ್ಪನ್ ಪೇಟೆ ಠಾಣೆಯ ಹುಂಚದ ಮುತ್ತಿನಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಜಯಮ್ಮನವರ ಹಂತಕರನ್ನ ಬಂಧಿಸುವಲ್ಲಿ ರಿಪ್ಪನ್ ಪೇಟೆ ಪೊಲೀಸರು ಬಂಧಿಸಿದ್ದಾರೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ
ಕೋಡೂರು ಗ್ರಾಪಂ ವ್ಯಾಪ್ತಿಯ,
ಯಳಗಲ್ಲು ಗ್ರಾಮದ ಮಯೂರ ಕೆ. (24) ತನ್ನ ಅತ್ತೆ ಹೊಳಲೂರು ಗ್ರಾಮದ ಸೀತಾರ ರವರು ಕೆಲಸ ಮಾಡುತ್ತಿದ್ದ ಮಠದಲ್ಲಿ,
ಕಸಗುಡಿಸುವ ಕೆಲಸ ಮಾಡುತ್ತಿದ್ದ
ಜಯಮ್ಮ ಕೋಂ ಕುಮಾರ (62) ರವರ
ಹತ್ತಿರ ಕೈಸಾಲವಾಗಿ ಹಣ ತೆಗೆದುಕೊಂಡು ಅದನ್ನು ವಾಪಾಸ್ ಕೊಡಲು ಸಾಧ್ಯವಾಗಿರಲಿಲ್ಲ.

ಜಯಮ್ಮನ ಹತ್ತಿರ ಹಣ ಮತ್ತು ಬಂಗಾರವಿರುವುದನ್ನು ಗಮನಿಸಿದ ಮಯೂರ ಕೆ ಅಪ್ರಾಪ್ತ ಸ್ನೇಹಿತನೊಂದಿಗೆ
ಬುದ್ಧಿವಂತಿಕೆಯಿಂದ ರಿಪ್ಪನ್‌ಪೇಟೆಯಲ್ಲಿ ಸೈಟ್ ಕೊಡಿಸುವುದಾಗಿ ನಂಬಿಸಿ ವ್ಯಾಗನಾರ್ ಕಾರಿನಲ್ಲಿ ಕೂರಿಸಿಕೊಂಡು ಬಂದ ಯುವಕ ಹಗ್ಗದ ಸಹಾಯದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿರುವುದು ತಿಳಿದು ಬಂದಿದೆ.

ಕೊಲೆಯನ್ನು ಮರೆ ಮಾಚುವ ಉದ್ದೇಶದಿಂದ ಬೇಲಿ ಕಂಬದ ಕಲ್ಲನ್ನು ಜೊತೆಗೆ ಪ್ಲಾಸ್ಟಿಕ್ ಹಗ್ಗದಿಂದ ಸುತ್ತಿ ಬಿಗಿದು ಅದೇ ದಿನ ರಾತ್ರಿ ಸುಮಾರು 10:45ರ ಸುಮಾರಿಗೆ ಹುಂಚ ಮುತ್ತಿನಕೆರೆಯಲ್ಲಿ ಮೃತದೇಹವನ್ನು ಬಿಸಾಕಿ ಹೋಗಿದ್ದರು.

ಮೊದಲಿಗೆ ಜಯಮ್ಮನ ಶವ ಪತ್ತೆಯಾಗಿರಲಿಲ್ಲ. ಎರಡುದಿನಗಳ ನಂತರ ಪತ್ತೆಯಾಗಿತ್ತು. ನಂತರ ಪೊಲೀಸರ ಖಡಕ್ ಕಾರ್ಯಾಚರಣೆಯಿಂದ ಪ್ರಕರಣ ಬೇಧಿಸಲಾಗಿದೆ.

ಇದನ್ನೂ‌ ಓದಿ-https://suddilive.in/archives/11802

Related Articles

Leave a Reply

Your email address will not be published. Required fields are marked *

Back to top button