ರಾಜಕೀಯ ಸುದ್ದಿಗಳು

5 ಕೆಎಸ್ ಆರ್ ಟಿಸಿ ಬಸ್ ಗಳ ಸಂಚಾರಕ್ಕೆ ರಾಜ್ಯಾಧ್ಯಕ್ಷ ವಿಜೇಂದ್ರರಿಂದ ಚಾಲನೆ

ಸುದ್ದಿಲೈವ್/ಶಿವಮೊಗ್ಗ

ಇಂದು ಶಿಕಾರಿಪುರ ತಾಲೂಕಿನ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಮಹಿಳೆಯರಿಗೆ ರೈತರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ನೂತನ  5 ಕೆ ಎಸ್ ಆರ್ ಟಿ ಸಿ ಬಸ್ಸುಗಳಿಗೆ ಶಾಸಕರು ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ನವರು ಚಾಲನೆ ನೀಡಿದರು,

ಇದುವರೆಗೂ ಶಿಕಾರಿಪುರದಲ್ಲಿ ಯಾವ ಪ್ರದೇಶದಲ್ಲಿ ಬಸ್ ಸಂಚಾರ ವ್ಯವಸ್ಥೆ ಇಲ್ಲವೋ ಅಂತಾ ಪ್ರದೇಶಗಳಿಗೆ ಬಸ್ ಸಂಚರಿಸಲು ಅನುವು ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಸಾರಿಗೆ ಇಲಾಖೆ ಸಚಿವ ರಾಮಲಿಂಗರೆಡ್ಡಿ ಅವರಿಗೆ ಬಿಎಸ್ ವೈ ಹುಟ್ಟುಹಬ್ಬಕ್ಕೆ ನೀಡಲು ಕೋರಲಾಗಿತ್ತು. 30 ಬಸ್ ನಲ್ಲಿ ಸಧ್ಯಕ್ಕೆ 5 ಬಸ್ ನ್ನ ಶಿಕಾರಿಪುರ ಘಟಕಕ್ಕೆ ಕಳುಹಿಸಲಾಗಿದೆ. ಇಂದು ಉದ್ಘಾಟನೆ ಆಗಿದೆ. ಇನ್ನೆರಡು ದಿನಗಳಲ್ಲಿ ಅಗತ್ಯವಿರುವ ಕಡೆ ಈ ಬಸ್ ಗಳ ಸಂಚಾರ ಆರಂಭವಾಗಲಿದೆ.

ಈ ಕುರಿತು ಮಾರಿಕಾಂಬ ಬಯಲು ರಂಗ ಮಂದಿರದ ಮೈದಾನದಲ್ಲಿ ನಡೆದ ಬಿಜೆಪಿ ತಾಲೂಕು ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮಾತಾಡಿದ ರಾಜ್ಯಾಧ್ಯಕ್ಷ ವಿಜೇಂದ್ರ, ಬಂದ ಐದು ಬಸ್ ಗಳು ರೂಟ್ ಗೆ ಹಚ್ಚಬಾರದು. ಎಲ್ಲಿ ಬಸ್ ಗಳು ಓಡಾಡುವುದಿಲ್ಲವೋ ಅಲ್ಲಿ ಬಸ್ ಗಳು ಓಡಾಡುವಂತೆ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ, ಪ್ರಮುಖರಾದ ಕೆಎಸ್ ಗುರುಮೂರ್ತಿ, ಪುರಸಭೆ ಸದಸ್ಯರಾದ ಪಾಲಾಕ್ಷಪ್ಪ ರೇಖಾ ಭಾಯಿ,ಮಂಜು ಸಿಂಗ್, ತಾಲೂಕ್  ಬಿಜೆಪಿ ನಗರ ಅಧ್ಯಕ್ಷರಾದ ಮಾಜಿ ರಾಘು, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿಯಾದ ಬೆಣ್ಣೆ ಪ್ರವೀಣ್, ತಾಲೂಕು ಯುವ ಮೋರ್ಚಾ ಅಧ್ಯಕ್ಷರಾದ ವೀರಣ್ಣ,ಗುರುಪ್ರಸಾದ್, ವಸಂತ್ ಗೌಡ್ರು, ಹಾಗೂ ಪಕ್ಷದ ಮುಖಂಡರು ಯುವಕರು ಕಾರ್ಯಕರ್ತರು ಉಪಸಿತರಿದ್ದರು

ಇದನ್ಬೂ ಓದಿ-https://suddilive.in/archives/9779

Related Articles

Leave a Reply

Your email address will not be published. Required fields are marked *

Back to top button