ರಾಜಕೀಯ ಸುದ್ದಿಗಳು

ಫೆ.27 ರಂದು ಹಳ್ಳಿಗಳು ಮತ್ತು ತಾಲೂಕು ಬಂದ್

ಸುದ್ದಿಲೈವ್/ಶಿವಮೊಗ್ಗ

ಬೆಂಬಲ ಬೆಲೆಗಿಂತ ಯಾವುದೇ ಏಜೆನ್ಸಿ ಕಡಿಮೆ ಬೆಲೆಗೆ ಖರೀದಿಸಿದರೆ ಶಿಕ್ಷಾರ್ಹ ಅಪರಾಧವಾಗಬೇಕು. ರೈತನ ಬೆಳೆಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಫೆ.27 ರಂದು ಕಾಡಾ ಕಚೇರಿ ಎದುರು ಪ್ರತಿಭಟನೆ ಮತ್ತು ರಾಜ್ಯಗಳ ಎಲ್ಲಾ ಗ್ರಾಮಗಳು ಮತ್ತು ತಾಲೂಕು ಬಂದ್ ಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಾಮೂಹಿಕ ನಾಯಕತ್ವದಲ್ಲಿ ಕರೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಸಂಘದ ರೈತ ಸಂಘಟನೆಯ ಮುಖಂಡ ಕೆಟಿ ಗಂಗಾಧರ್ ಫೆ. 27 ರಂದು ಬೆಳಿಗ್ಗೆ 9 ರಿಂದ ಸಂಜೆ 6ಗಂಟೆಯ ವರೆಗೆ ಹಳ್ಳಿ ಬಂದ್ ಮಾಡಲಾಗುತ್ತಿದೆ. ಈ ಬಗ್ಗೆ ಹಳ್ಳಿಗಳಿಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ. ಶಾಲಾ ಮಕ್ಕಳು ಶಾಲೆಗೆ ಹೋಗದಂತೆ ಮಾಹಿತಿ ನೀಡಲಾಗುತ್ತಿದೆ ಎಂದರು.

ಭದ್ರಾ ಯೋಜನೆಯಿಂದ ನೀರನ್ನ‌ ಕೋಲಾರದ ವರೆಗೆ ತೆಗೆದುಕೊಂಡು ಹೋಗುವ ಯೋಜನೆ ನಡೆಸಲಾಗುತ್ತಿದೆ. ಇದಕ್ಕೆ ಬಜೆಟ್ ನಲ್ಲಿ ಹಣ ಬಿಡುಗಡೆ ಮಾಡಿಲ್ಲ. ಈ ಬಗ್ಗೆನೂ ಬೇಡಿಕೆಯನ್ನ ಮುಂದಿಡಲಾಗುತ್ಯಿದೆ. ಅಗತ್ಯ ವಸ್ತುಗಳನ್ನ ಹೊರತು ಪಡಿಸಿ, ಆಸ್ಪತ್ರೆ, ಹಾಲು ಖರೀದಿಗೆ ಅವಕಾಶವಿರುತ್ತದೆ. ಇದು ರಾಜ್ಯಾದ್ಯಂತ ನೀಡಲಾಗುತ್ತಿದೆ ಎಂದರು.

ಕನಿಷ್ಠ ಬೆಲೆಯನ್ನ ಎತ್ತಿ ಹಿಡಿಯುವುದು, ಅಗತ್ಯ ವಸ್ತುಗಳ ಕಾಯಿದೆಯನ್ನ ತಿದ್ದುಪಡಿ ಮಾಡಬಾರದು, ಎಪಿಎಂಸಿ ಕಾಯಿದೆ ತಿದ್ದುಪಡಿಗಳು, ಕೃಷಿ ಮಾರುಕಟ್ಟೆ ಸಮಗ್ರತೆಯನ್ನ ರಕ್ಷಿಸಬೇಕು. ಭೂಸುಧಾರಣೆ ಕಾಯ್ದೆ ತಿದ್ದುಪಡಿಗಳನ್ನ ವಿರೋಧಿಸುವುದು. ಕಬ್ಬುಬೆಳೆಗಳ ನ್ಯಾಯಯುತ ಬೆಲೆ ನಿಗಧಿ ಬಗ್ಗೆ ಮುಖ್ಯ ಬೇಡಿಕೆಗಳನ್ನ ಮುಂದಿಟ್ಟುಕೊಂಡು ಬಂದ್ ಆಚರಿಸಲಾಗುತ್ತಿದೆ ಎಂದರು‌.

ಇದನ್ನೂ ಓದಿ-https://suddilive.in/archives/9278

Related Articles

Leave a Reply

Your email address will not be published. Required fields are marked *

Back to top button